Sunday, April 14, 2024

*ಭಾವಯಾನ….*- *ಅಸಹಾಯಕಿ*

ಎದೆಯ ಗೂಡಿನಲಿ ಬಚ್ಚಿಟ್ಟ ನೆನಪುಗಳನು
ಮನದಿಂದಾಚೆ ಕಳಿಸಬೇಕಿದೆ…
ಕಣ್ಣ ಕೊನೆಯಲ್ಲಿ ಫಳಕ್ಕೆಂದು ಚಿಮ್ಮಲು
ತುದಿಗಾಲಲಿ ನಿಂತ ಕಂಬನಿಯನ್ನು ಮರೆಮಾಚಬೇಕಿದೆ…!

ಪಿಸುಗುಟ್ಟಿದ ನೂರು ಮಾತುಗಳನು ಮನದೊಳಗೆನೇ ಹೂತು ಹಾಕಬೇಕಿದೆ…
ನಿನ್ನೆದೆಗೊರಗಿ ನಾ ಕಟ್ಟಿದ ಕನಸಿನ ಮಹಲನು
ಕೈಯಾರೆ ನಾನೇ ಕೆಡವಬೇಕಿದೆ…!

ಪ್ರೀತಿಯ ನೀರುಣಿಸಿ ಬೆಳೆಸಿದ
ಒಲವ ಬಳ್ಳಿಯನು ಕರುಣೆಯಿಲ್ಲದೆ ಕತ್ತರಿಸಬೇಕಿದೆ…
ನಿನ್ನೊಲವಿಂದ ನನ್ನೊಳಗೆ ಮೊಳೆತ ಬಯಕೆಗಳನು
ನಾನೇ ಕತ್ತು ಹಿಸುಕಿ ಸಾಯಿಸಬೇಕಿದೆ…!

ಸೋತು ಹೋಗಿರುವೆ ಕೈಲಾದ ಪ್ರಯತ್ನ ಮಾಡಿ..
ಕೈ ಮುಗಿದು ಬೇಡುತ್ತಿರುವೆ…
ನನ್ನೊಳಗೆ ಕುಳಿತ ನೀನು ನನ್ನಿಂದ ದೂರ ಹೋಗಿಬಿಡು…
ನಿತ್ಯ ಬಸವಳಿವ ಈ ಬಡಪಾಯಿ ಹೃದಯಕ್ಕೆ
ಭಾವ ತಲ್ಲಣಗಳಿಂದ ಮುಕ್ತಿ ನೀಡು…!

 

  • *ಪ್ರಮೀಳಾ ರಾಜ್*

 

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...