ಮಂಗಳೂರು: ಮಂಗಳೂರು ಸಮೀಪದ ಕಾವೂರು ಮಾರುಕಟ್ಟೆ ಸ್ಥಳಾಂತರ ವಿಚಾರ ಹಿನ್ನೆಲೆಯಲ್ಲಿ ಪರಿಸರದಲ್ಲಿ ಕೆಲಹೊತ್ತು ಅತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಂಗಳೂರು ಮನಪದಿಂದ ಈ ಹಿಂದಿನ ರಸ್ತೆ ಬದಿ ಮಾರುಕಟ್ಟೆ ತೆರವು ಕಾರ್ಯಚರಣೆ ನಡೆಸಲಾಗಿದೆ.
ಕಾವೂರಿನಲ್ಲಿ ನಿರ್ಮಾಣವಾಗಿರುವ ನೂತನ ಮಾರುಕಟ್ಟೆಗೆ ಮಾರಾಟಗಾರರು ತೆರಳುವಂತೆ ಮಂಗಳೂರು ಮ.ನ.ಪ ಸೂಚನೆ ನೀಡಿತ್ತು.ಆದರೆ ಮನಪ ಸೂಚನೆಗೆ ಕ್ಯಾರೆ ಅನ್ನದ ಮಾರಾಟಗಾರರು ಅಲ್ಲೇ ವ್ಯಾಪಾರ ವಹಿವಾಟು ನಡೆಸಲು ಮುಂದಾಗಿದ್ದರು.
ಈ ಹಿಂದೆ ಮೇಯರ್ ನಿಂದ ಕಾವೂರು ಹಳೆ ಮಾರುಕಟ್ಟೆ ತೆರವು ಕಾರ್ಯಾಚರಣೆ ಕೂಡ ನಡೆದಿತ್ತು.
ಬೀದಿ ಬದಿಯ ಅಂಗಡಿಗಳನ್ನು ತೆರವು ಮಾಡಿದ ಬಳಿಕ ಮನಪ
ತಂತಿ ಬೇಲಿ ಅಳವಡಿಸಿದ್ದಾರೆ.
ಮನಪ ಹಾಕಿದ
ತಂತಿ ಬೇಲಿ ಕಿತ್ತು ಮತ್ತೆ ಮಾರಾಟಕ್ಕಿಳಿದ ಮಾರಾಟಗಾರರು ಸಡ್ಡುಹೊಡೆಯಲು ಮುಂದಾಗಿದ್ದೇ ಇಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಲು ಕಾರಣವಾಗಿತ್ತು.
ಕಾವೂರು ಮಾರಾಟಗಾರರ ವಿರುದ್ದ ಗರಂ ಆಗಿರುವ ಮನಪ
ಇಂದು ಬೆಳ್ಳಂಬೆಳಗೆ ದಾಳಿ ಮಾಡಿದ್ದಾರೆ.
ಸ್ಥಳದಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ್
ಮತ್ತು ಮಾರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆದು ಕೆಲ ಹೊತ್ತು ಬಿಸಿಬಿಸಿ ವಾತಾವರಣ ನಿರ್ಮಾಣವಾಗಿತ್ತು.