ಬಂಟ್ವಾಳ: ಅಕ್ರಮವಾಗಿ ಗುಡ್ಡೆಯಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದ ವೇಳೆ ಬಂಟ್ವಾಳ ನಗರ ಠಾಣಾ ಪೋಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಸಾವಿರಾರು ರೂ ಮೌಲ್ಯದ ಸಾರಾಯಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಾರ್ನಬೈಲು ಸಮೀಪದ ಕಂದೂರು ಎಂಬಲ್ಲಿರುವ ಬಾರೊಂದರ ಹಿಂಬದಿಯ ಗುಡ್ಡದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಕಾರಾಜೆ ನಿವಾಸಿ ದಿನೇಶ್ ಪೂಜಾರಿ ಹಾಗೂ ಬೆಳುವಾಯಿ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 20 ಸಾವಿರ ರೂ ಯ ನಗದು ಹಾಗೂ 14,074 ರೂ ಮೌಲ್ಯದ ಸಾರಾಯಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಕಾರ್ಯಚರಣೆ ಯಲ್ಲಿ ಸಿಬ್ಬಂದಿ ಗಳಾದ ಶಿವರಾಮ್, ಲೋಕೇಶ್, ಬಸವರಾಜ್, ಮಾರುತಿ, ಹಾಗೂ ಚಾಲಕ ವಿಜಯ್ ಅವರು ಭಾಗವಹಿಸಿದ್ದರು.