Friday, February 7, 2025

ಬಿ.ಸಿ.ರೋಡಿನಲ್ಲಿ ಯಕ್ಷಗಾನದ ವೈಭವ

ಡಿಸೆಂಬರ್ ತಿಂಗಳ ಈ ಕೊರೆಯುವ ಚಳಿಯಲ್ಲಿ ಬೀಳುವ ಮಂಜಿನ ಹನಿಗಳನ್ನು ಮೀರಿ ಬಿ.ಸಿ.ರೋಡು ಮತ್ತು ಇಲ್ಲಿನ ಆಸುಪಾಸಿನಲ್ಲಿ ಚೆಂಡೆಯ ಅಬ್ಬರದ ಧ್ವನಿ ಮೊಳಗಲಿದೆ. ಎಲ್ಲರ ಕಿವಿಗಳಿಗೂ ಭಾಗವತರ ಏರಿಳಿತದ ಆ ಸುಮಧುರ ಗಾನ ಶೈಲಿಯು ಅಲೆ ಅಲೆಯಾಗಿ ಕೇಳಿಬರಲಿದೆ. ಹೌದು ಕರಾವಳಿಯ ಗಂಡು ಕಲೆ ಯಕ್ಷಗಾನ ಈ ಡಿಸೆಂಬರ್ 15 ರಿಂದ ಅಲ್ಲಲ್ಲಿ ನಡೆಯುತ್ತಾ ಇರುವುದು ಒಂದು ರೀತಿಯಲ್ಲಿ ಯಕ್ಷಗಾನ ಪ್ರಿಯರಿಗೆ ರಸದೌತಣವಿದ್ದಂತೆ.

ವೃತ್ತಿಪರ ಮೇಳ ಮತ್ತು ಸಣ್ಣಪುಟ್ಟ ತಂಡಗಳು ತಮ್ಮನ್ನು ತಾವು ಯಕ್ಷಗಾನದಲ್ಲಿ ತೊಡಗಿಸಿಕೊಂಡು ಪ್ರೇಕ್ಷಕರಿಗೆ ಹಬ್ಬದ ವಾತಾವರಣವನ್ನುಂಟು ಮಾಡುವುದಂತೂ ನಿಜ. ಹಿಂದೊಂದು ಕಾಲದಲ್ಲಿ ಜನರು ಯಕ್ಷಗಾನ ನೋಡುವುದಕ್ಕಾಗಿ ದೂರ ದೂರ ಹೋಗುತ್ತಿದ್ದರು. ಆದರೆ ಈಗ ಬಹಳ ಹತ್ತಿರಲ್ಲಿಯೇ ಯಕ್ಷಗಾನಗಳನ್ನು ನೋಡುವ ಅವಕಾಶ ಜನರಿಗೆ ಲಭಿಸುತ್ತಿದೆ.

ಇದೇ ರೀತಿ ಡಿ.15 ರಿಂದ ಡಿ.21 ವರೆಗೆ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಯ ಸಮಿತಿಯವರ ವತಿಯಿಂದ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು ಮೇಳದವರಿಂದ ಮೆಲ್ಕಾರ್ ಆರ್.ಕೆ. ಎಂಟರ್‌ಪ್ರೈಸಸ್‌ನ ಎದುರುಗಡೆ ಯಕ್ಷಗಾನ ಸಪ್ತಾಹ ನಡೆಯಲಿದೆ. ಗಿರಿಜಾ ಕಲ್ಯಾಣ-ತಾರಕಾಸುರ ವಧೆ, ಶರಸೇತು-ಸುಭದ್ರಾ ಕಲ್ಯಾಣ, ಕನಕಾಂಗಿ ಕಲ್ಯಾಣ, ಅತಿಕಾಯ-ಇಂದ್ರಜಿತು, ಮಾಗಧ ವಧೆ-ಪುರುಷಾಮೃಗ-ರಕ್ತರಾತ್ರಿ, ವಸ್ತ್ರಾಪಹಾರ-ಗದಾಪರ್ವ, ದ್ರೌಪಧಿ ಪ್ರತಾಪ ಹೀಗೆ 7 ದಿನಗಳು ನಡೆಯುತ್ತಿದೆ.

ಡಿಸೆಂಬರ್ 22ರಂದು ಬಿ.ಸಿ.ರೋಡಿನಲ್ಲಿ ಅಯ್ಯಪ್ಪ ಭಕ್ತವೃಂದದವರ ವತಿಯಿಂದ ಸುಂಕದಕಟ್ಟೆ ಮೇಳದವರಿಂದ ಸತ್ಯ ದೈವೊಲು ಅದೇ ದಿನ ಬಡಗು ತಿಟ್ಟಿನ ಪೆರ್ಡೂರು ಮೇಳದವರಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಚಂದ್ರಹಾಸ-ಚಂದ್ರಾವಳಿ ವಿಲಾಸ ಟೆಂಟ್ ನೊಳಗೆ ಕೂತು ಯಕ್ಷಗಾನವನ್ನು ಸವಿಯಬಹುದು.

ಡಿಸೆಂಬರ್ 23ರಂದು ನರಿಕೊಂಬುವಿನ ವಿವೇಕ ಜಾಗೃತ ಬಳಗದವರ ವತಿಯಿಂದ ಹವ್ಯಾಸಿ ಕಲಾವಿದರಿಂದ ಕೃಷ್ಣಲೀಲೆ-ಕಂಸವಧೆ, ಡಿಸೆಂಬರ್ 24ರಂದು ಮೊಗರ್ನಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ತೆಂಕು-ಬಡಗು ಕಲಾವಿದರ ಅಪೂರ್ವ ಸಂಗಮದಲ್ಲಿ ಮದನಾಕ್ಷಿ-ತಾರಾವಳಿ, ವೀರಮಣಿ ಕಾಳಗ, ಗಧಾಯುದ್ಧ, ದ್ರೌಪದಿ ಪ್ರತಾಪ ಯಕ್ಷಗಾನ ನಡೆಯಲಿದೆ.

ಇವಿಷ್ಟು ಯಕ್ಷಗಾನದ ಬಗ್ಗೆಯಾದರೆ ಇನ್ನೊಂದೆಡೆ ಡಿಸೆಂಬರ್ 23ರಿಂದ 30ರ ವರೆಗೆ ಕರಾವಳಿ ಕಲೋತ್ಸವ ನಡೆಯಲಿದ್ದು ಈ ವೇದಿಕೆಯಲ್ಲಿ ನಾಟಕ ಸ್ಪರ್ಧೆ, ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, ಚೆಂಡೆ ಸ್ಪರ್ಧೆಗಳು ನಡೆಯುವುದರ ಜೊತೆಗೆ ಬೇರೆ ಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕಲಾಪ್ರಿಯರಿಗೆ ಎಲ್ಲ ರೀತಿಯಿಂದಲೂ ಸಂತೋಷವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಬಿ.ಸಿ.ರೋಡಿನಲ್ಲಿ ಇನ್ನು 12 ದಿನದಲ್ಲಿ ಸಾಂಸ್ಕೃತಿಕ ಜಾತ್ರೆಗೆ ಸಾಕ್ಷಿಯಾಗಲಿದೆ.

ಬಡಗು ಯಕ್ಷಗಾನಕ್ಕೆ ತುಡರ್ ಯಕ್ಷಮಿತ್ರೆರ್‌ರ ಸೇವೆ
ಕಳೆದ ಕೆಲವು ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ಬಡಗುತಿಟ್ಟಿನ ಯಕ್ಷಗಾನವನ್ನು ‘ತುಡರ್ ಯಕ್ಷ ಮಿತ್ರೆರ್’ ಸಂಘಟನೆ ಬಡಗುತಿಟ್ಟು ಯಕ್ಷಗಾನವನ್ನು ನೋಡುವ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಯಕ್ಷಗಾನ ಬಯಲಾಟವನ್ನು ನಡೆಸುತ್ತಿದ್ದಾರೆ. ನಾಗವಲ್ಲಿ, ಶಂಕರಾಭರಣ, ಕ್ಷಮಯಾಧರಿತ್ರಿ, ಅಹಂಬ್ರಹ್ಮಾಸ್ಮಿ ಎಂಬ ಯಕ್ಷಗಾನ ಪ್ರಸಂಗಗಳನ್ನು ಮಾಡಿಸಿ ಆ ಮೂಲಕ ಬಡಗಿನ ನಾಟ್ಯ, ಅವರ ಶೈಲಿಯು ಬಂಟ್ವಾಳ ತಾಲೂಕಿನ ಯಕ್ಷಗಾಭಿಮಾನಿಗಳಿಗೆ ಪರಿಚಯಿಸಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.

More from the blog

ಬಂಟ್ವಾಳ : ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೀಡಿ – ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ

ಬಂಟ್ವಾಳ: ಸುಸಜ್ಜಿತವಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವಿಭಾಗದಲ್ಲಿ ವೈದ್ಯರುಗಳಿಲ್ಲದೆ, ತಾಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಸಾಮಾಜಿಕ ಕಾರ್ಯಕರ್ತ ಸಮಾದ್ ಕೈಕಂಬ ಅವರು...

ಕಣಿಯೂರು: ನುಡಿನಮನ, ಯಕ್ಷಗಾನ ತಾಳಮದ್ದಳೆ

ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಉಪನ್ಯಾಸಕ ಪಕಳಕುಂಜ ಶ್ಯಾಮ್ ಭಟ್, ಕೂಡ್ಲು ಗಣಪತಿ ಭಟ್ ಅವರಿಗೆ ನುಡಿ ನಮನ ಹಾಗೂ ಯಕ್ಷಗಾನ ತಾಳಮದ್ದಳೆ...

ಒಡಿಯೂರಿನಲ್ಲಿ 25ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಒಡಿಯೂರು ರಥೋತ್ಸವ ತುಳುನಾಡ ಜಾತ್ರೆಯ ಅಂಗವಾಗಿ 25 ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ...

ಕೇಂದ್ರ ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ : ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಸಂಸದ

ನವದೆಹಲಿ : ಸಂಸದ ಬ್ರಿಜೇಶ್ ಚೌಟ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡದ ರೈತರು ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ...