ವಿಟ್ಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್-ಎಸ್ಎಸ್ಎಫ್ ವಿಟ್ಲ ಡಿವಿಷನ್ ಇದರ ವಾರ್ಷಿಕ ಮಹಾಸಭೆಯು ಬೈರಿಕಟ್ಟೆಯ ಎಸ್ಎಸ್ಎಫ್ ಕಚೇರಿಯಲ್ಲಿ ಡಿವಿಷನ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಸಖಾಫಿ ಕೆಲಿಂಜರವರ ಅಧ್ಯಕ್ಷತೆಯಲ್ಲಿ ನಡೆಯಿತು, ದಾರುಲ್ ಅಶ್-ಅರಿಯ್ಯಾ ಮ್ಯಾನೇಜರ್ ಮಹಮ್ಮದಲಿ ಸಖಾಫಿ ಸುರಿಬೈಲು ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಪೆಲ್ತಡ್ಕ ವಾರ್ಷಿಕ ವರದಿ ವಾಚಿಸಿದರು. ಕ್ಯಾಂಪಸ್ ಕಾರ್ಯದರ್ಶಿ ಜಂಶಾದ್ ಕಂಬಳಬೆಟ್ಟು ಕ್ಯಾಂಪಸ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಅಬ್ದುಲ್ ರೆಹಮಾನ್ ಶರಫಿ ಮೂಡಂಬೈಲು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಸ್ವೈಎಸ್ ವಿಟ್ಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಪಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಇ(ಸಿವಿಲ್) ಪದವಿ ಪಡೆದ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿಯಾಗಿದ್ದ ಜಂಶಾದ್ ಕಂಬಳಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಅಬ್ದುಲ್ ರಶೀದ್ ಹಾಜಿ ವಗ್ಗರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಂ ಅಬೂಬಕ್ಕರ್ ಹಿಮಮಿ ಸಖಾಪಿ, ಕೋಶಾಧಿಕಾರಿಯಾಗಿ ಸಿ.ಹೆಚ್. ಅಬ್ದುಲ್ ಖಾದರ್ ಕೊಡಂಗಾಯಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಾಹಿರ್ ಕೊಳಂಬೆ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಝಾಕ್ ಪೆಲ್ತಡ್ಕ ಹಾಗೂ ರಫೀಕ್ ಸಅದಿ ಅಳಕೆಮಜಲು,
ಕಾರ್ಯದರ್ಶಿಗಳಾಗಿ ಅಶ್ಪಾಕ್ ಕೊಡಂಗಾಯಿ ಹಾಗೂ ಜಂಶಾದ್ ಕಂಬಳಬೆಟ್ಟು ಹಾಗೂ ೨೧ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು
ಆಯ್ಕೆಯ ಸಂದರ್ಭದಲ್ಲಿ ವಿಟ್ಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಎಂ.ಕೆ.ಎಂ ಸಖಾಫಿ ಕೊಡಂಗಾಯಿ, ಮುಸ್ತಫಾ ಕೋಡಪದವು, ಕೆಸಿಎಫ್ ನಾಯಕರಾದ ಸಿದ್ದೀಕ್ ಸಖಾಫಿ ಪೆರುವಾಯಿ ಮೊದಲಾದವರು ಉಪಸ್ಥಿತರಿದ್ದರು.
ರಝಾಕ್ ಪೆಲ್ತಡ್ಕ ಸ್ವಾಗತಿಸಿದರು. ನೂತನ ಪ್ರಧಾನ. ಕಾರ್ಯದರ್ಶಿ ಅಬೂಬಕ್ಕರ್ ಹಿಮಮಿ ವಂದಿಸಿದರು.

