ವಿಟ್ಲ : ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರಾಮಹೋತ್ಸವದ ಅಂಗವಾಗಿ ವಿಆರ್ಸಿ ವಿಟ್ಲ ದ ವತಿಯಿಂದ ವಿಟ್ಲೋತ್ಸವ ಭಾನುವಾರ ರಾತ್ರಿ ನಡೆಯಿತು.
ಇದೇ ಸಂದರ್ಭದಲ್ಲಿ ಕುಸ್ತಿಯಲ್ಲಿ ವಿಶೇಷ ಸಾಧನೆ ಮಾಡಿದ ಮಾದರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಂಜುನಾಥ ಟಿ., ಗಝಲ್ ಸ್ಪರ್ಧೆಯಲ್ಲಿ ವಿಶೇಷ ಸಾಧನೆ ಮಾಡಿದ ಮಾದರಿ ಶಾಲೆಯ ೮ನೇ ತರಗತಿಯ ಶ್ರೀವಿದ್ಯಾ ಪಾದೆಕಲ್ಲು ಅವರನ್ನು ಸನ್ಮಾನಿಸಲಾಯಿತು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ಈಜು ತರಬೇತುದಾರ ತುಳಸಿದಾಸ್ ಶೆಣೈ, ವಿಆರ್ಸಿ ವಿಟ್ಲದ ರಮಾನಾಥ ವಿಟ್ಲ, ಅಶೋಕ್ ವಿಟ್ಲ ಉಪಸ್ಥಿತರಿದ್ದರು. ವಕೀಲ ನಟೇಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ದೇವಸ್ಥಾನದ ಆವರಣದಲ್ಲಿ ವಿಶೇಷ ರೀತಿಯಲ್ಲಿ ವಾದ್ಯ ಸಂಗೀತ ನಡೆಯಿತು. ರಥದ ಗದ್ದೆಯಲ್ಲಿ ವಿಜಯ ಕುಮಾರ್ ಕೊಡಿಯಾಲ್ ಬೈಲು ರಚನೆ ಕಡಲ ಮಗೆ ತುಳು ವಿಭಿನ್ನ ಶೈಲಿಯ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

