Tuesday, January 27, 2026

ವಿಟ್ಲ: ನ್ಯೂಬೀ ಪ್ರೀಸ್ಕೂಲ್ ಚಿಣ್ಣರೋತ್ಸವ

ವಿಟ್ಲ: ವಿಟ್ಲ ಮೇಗಿನಪೇಟೆ ಯ ವಿಸ್ಡಂ ವೇವ್ ಅಕಾಡೆಮಿ ಪ್ರೀಸ್ಕೂಲ್‌ನಲ್ಲಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ದುಆ ಮೂಲಕ ಅಬ್ದುಲ್ ಖಾದರ್ ಮುಸ್ಲಿಯಾರ್ ವಿಧ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನ್ಯೂಬೀ ಇಸ್ಲಾಮಿಕ್ ಪ್ರೀಸ್ಕೂಲ್ ಕುರಿತು ಸಭೀಕರಿಗೆ ತಿಳಿ ಹೇಳಿದ ವ್ವಾ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಅಲ್ ಹಾಜ್ ಯಾಸೀನ್ ಸಅದಿ ಅಲ್ ಅಫ್ಲಲೀ ಬೆರಳೆಣಿಕೆಯ ವರ್ಷಗಳಲ್ಲಿ ಶಿಶು ಮನಸ್ಸುಗಳಿಗೆ ಖುರ್‌ಅನಿನ ಸಿಂಚನವನ್ನು ಸಾಕ್ಷಾತ್ಕಾರ ಮಾಡಿದ ನ್ಯೂ ಬಿ ಸಂಸ್ಥೆಯು ನಡೆದು ಬಂದ ಹಾದಿಯನ್ನು ವಿವರಿಸಿದರು.
ಮನ್ಶರ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್‌ನ ಸಾರಥಿ ಹಾಗೂ ಶಿಲ್ಪಿ ಅಸೈಯ್ಯಿದ್ ಉಮರ್ ಅಸ್ಸಖಾಫ ತಂಙಳ್ ರವರು ಪ್ರಸ್ತುತ ವರುಷದ ದಾಖಲಾತಿ ಮತ್ತು ನ್ಯೂಬೀ ಯ ಅತೀ ವಿನೂತನ ಯೋಜನೆ ಬಗ್ಗೆ ಪ್ರಸ್ತಾಪಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ ಅಲ್ಪ ಸಮಯದಲ್ಲಿ ಮನೆ ಮಾತಾದ ಈ ಪ್ರೀ ಸ್ಕೂಲ್ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ಒಂದೇ ಸೂರಿನಡಿಯಲ್ಲಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ಇಬ್ರಾಹಿಂ ಮೇಗಿನಪೇಟೆ, ಹಸೈನಾರ್ ಕುಂಡಡ್ಕ, ಅಬ್ಧುಲ್ ಖಾದರ್ ಕಬಕ, ಹನೀಫ್ ಎಂ.ಎ,
ಹಾಜಿ ಅಬ್ದುಲ್ಲಾ ಉಡುಪಿ, ಇಸಾಕ್ ಮಂಗಿಲಪದವು(ದುಬೈ), ಮಹಮ್ಮದ್ ಇರ್ಷಾದಿಯಾ, ಇಕ್ಬಾಲ್ ಶೀತಲ್, ರಫೀಕ್ ಮುಸ್ಲಿಯಾರ್ ಕೊಳಂಬೆ, ಅಬ್ದುಲ್ ಖಾದರ್ ಸಖಾಫಿ ಒಕ್ಕೆತ್ತೂರು, ಅಬ್ದುರ್ರಶೀದ್ ಮದನಿ ಸಂಪ್ಯ, ಮುಹಮ್ಮದ್ ಫಳಿಲಿ ಅಲ್ ಖಾಮಿಲ್ ಸಖಾಫಿ ಟಿಪ್ಪುನಗರ ಉಪಸ್ಥಿತರಿದ್ದರು.
ಸಂಚಾಲಕ ಅಬ್ದುರ್ರಝಾಕ್ ಸ.ಅದಿ ಕೊಡಿಪ್ಪಾಡಿ ಸ್ವಾಗತಿಸಿದರು. ಹೈದರ್ ಅಳಕೆಮಜಲ್ ವಂದಿಸಿದರು,
ಅಬ್ದುಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...