Monday, February 2, 2026

ವಿಟ್ಲ: ಲಾಕ್‍ಡೌನ್ ಯಶಸ್ವಿ

ವಿಟ್ಲ: ಕೊರೊನಾ ವೈರಸ್‍ನ ಭೀತಿಯಿಂದ ಜಿಲ್ಲೆಗೆ ಸಂಪೂರ್ಣ ಲಾಕ್‍ಡೌನ್ ಹೇರಿದ್ದ ಕಾರಣ ವಿಟ್ಲ ಪೇಟೆಯಲ್ಲಿ ಮಂಗಳವಾರ ಪೇಟೆಯ ಅರ್ಧದಷ್ಟು ಅಂಗಡಿ ಮುಂಗಟ್ಟುಗಳು, ವ್ಯವಹಾರ ಕೇಂದ್ರಗಳು ತೆರೆದಿದ್ದರೂ, ಮಧ್ಯಾಹ್ಮ್ನ  ಸಂಪೂರ್ಣವಾಗಿ ಮುಚ್ಚಲ್ಪಟ್ಟಿತ್ತು.

ಮಂಗಳವಾರ ಬೆಳಗ್ಗೆ ಕೆಲವು ಅಟೋರಿಕ್ಷಾಗಳು ರಸ್ತೆಗೆ ಇಳಿದಿದ್ದರೂ, ಜನರೇ ಇಲ್ಲದ ಕಾರಣ ಸ್ವಲ್ಪ ಹೊತ್ತಿನಲ್ಲಿ ಮನೆಯ ಕಡೆ ಹೊರಟಿದ್ದವು. ಉಳಿದಂತೆ ವಾಹನ ಸಂಚಾರ ಅತೀ ವಿರಳವಾಗಿತ್ತು.
ಪೊಲೀಸರು ಎಲ್ಲಾ ಕಡೆ ಸುತ್ತಾಡಿ ಅತ್ಯವಶ್ಯಕವಾದ ಮೆಡಿಕಲ್, ಹಾಲು ವಿತರಣ ಕೇಂದ್ರಗಳನ್ನು ಹೊರತು ಪಡಿಸಿ ಉಳಿದಂತೆ ಬಂದ್ ಮಾಡಲು ಸೂಚನೆ ನೀಡಿದರು.
ಅನಗತ್ಯ ಸುತ್ತಾಟಕ್ಕೆ ಕಡಿವಾಣ: ಪೇಟೆಯಲ್ಲಿ ಅನಾವಶ್ಯಕವಾಗಿ ಸುತ್ತಾಡಲು ಬಂದಿದ್ದ ಹಲವರನ್ನು ಪೊಲೀಸರು ವಿಚಾರಿಸಿ, ಗದರಿಸಿ ಮನೆಗೆ ಕಳುಹಿಸುತ್ತಿದ್ದರು. ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‍ನಲ್ಲಿ ನಿಂತ ಪೊಲೀಸರು ಪ್ರತಿಯೊಬ್ಬರಿಗೂ ಮನೆಗೆ ಹೋಗಲು ಸೂಚನೆ ನೀಡಿದರು. ಪೊಲೀಸರ ಮಾತನ್ನು ಮೀರಿದ ಕೆಲ ಮಂದಿಗೆ ಲಾಠಿ ಹಿಡಿದ ಪ್ರಸಂಗವೂ ನಡೆಯಿತು.
ಕಂದಾಯ ಅಧಿಕಾರಿಗಳಿಂದ ಸೂಚನೆ: ಕಂದಾಯ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳೂ ಸಹ ಮಂಗಳವಾರವೂ ಸಹ ಮುಚ್ಚಿರದ ಅಂಗಡಿ ಮಾಲೀಕರಿಗೆ ಮುಚ್ಚಲು ಸೂಚನೆ ನೀಡಿದರು. ಮಧ್ಯಾಹ್ನವಾಗುತ್ತಲೇ ಎಲ್ಲಾ ಅಂಗಡಿಗಳು, ವ್ಯವಹಾರ ಕೇಂದ್ರಗಳೂ ಮುಚ್ಚಿದ್ದವು. ಈ ಮಧ್ಯೆ ಜನರಿಗೆ ಅವಶ್ಯಕವಾಗಿ ಬೇಕಾಗಿದ್ದ ಮೆಡಿಕಲ್ ಅಂಗಡಿಗಳನ್ನು ಮುಚ್ಚಿದ್ದರು. ಪೇಟೆಯಲ್ಲಿ ಯಾರನ್ನೂ ಸಹ ನಿಲ್ಲಲು ಬಿಡುತ್ತಿರಲಿಲ್ಲ. ವಾಹನದಲ್ಲಿ ಸಾಗುವವರನ್ನು ವಿಚಾರಿಸದೇ ಬಿಡುತ್ತಿರಲಿಲ್ಲ. ಮಾ.31ರ ತನಕ ಪೇಟೆಗೆ ಬರಬೇಡಿ ಎಂದೂ ಹೇಳಿ ಕಳುಹಿಸುತ್ತಿದ್ದರು.


ವಾರದ ಸಂತೆ ರದ್ದು: ವಿಟ್ಲದ ವಾರದ ಸಂತೆ ಮಂಗಳವಾರ ನಡೆಯುತ್ತಿದ್ದು, ಇಂದು ಸಂತೆ ಮಾರುಕಟ್ಟೆ ತೆರೆಯಲೇ ಇಲ್ಲ. ಕಳೆದ ಮಂಗಳವಾರದಿಂದಲೇ ಪಟ್ಟಣ ಪಂಚಾಯಿತಿ ಸೂಚನೆ ನೀಡಿತ್ತು. ಆದ ಕಾರಣ ಅಪ್ಪಿತಪ್ಪಿಯೂ ಸಂತೆ ಮಾರುಕಟ್ಟಗೆ ಜನ ಮುಖಮಾಡಲೇ ಇಲ್ಲ.
ಮೆಡಿಕಲ್ ಅಂಗಡಿಗಳು ಬೇಕಿದ್ದವು: ಲಾಕ್‍ಡೌನ್ ಪರಿಣಾಮವಾಗಿ ಎಲ್ಲಾ ಅಂಗಡಿಗಳು ಮುಚ್ಚುತ್ತಾ ಹೋದಂತೆ ಮೆಡಿಕಲ್ ಅಂಗಡಿ ಮಾಲೀಕರೂ ಸಹ ಮಧ್ಯಾಹ್ನವಾಗುತ್ತಿದ್ದಂತೆ ಪೇಟೆಯಲ್ಲಿ ನರಪಿಳ್ಳೆಯೂ ಇಲ್ಲವೆಂದುಕೊಂಡು ಮೆಡಿಕಲ್‍ಗಳಿಗೆ ಬಾಗಿಲು ಹಾಕಿದರು. ಕೆಲ ಜನರು ಮೆಡಿಕಲ್ ಹುಡುಕುತ್ತಾ ಬಂದರೂ ಯಾವೊಂದು ಮೆಡಿಕಲ್ ತೆರೆಯದೇ ಇಲ್ಲದಿರುವುದನ್ನು ಕಂಡು ಮೆಡಿಕಲ್‍ಗಳು ಮುಚ್ಚಿದರೆ ರೋಗಿಗಳ ಗತಿಯೇನು ಎಂದು ಅಳಲು ವ್ಯಕ್ತಪಡಿಸುತ್ತಾ ನಡೆದರು.

More from the blog

ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

ವಿಟ್ಲ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಕಲಾ ಪ್ರತಿಷ್ಠಾನ ಪುಣಚ ಇವರಿಂದ ಮಾಸಿಕ 'ರಾವಣ ವಧೆ' ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್. ಚೆಂಡೆ ಮದ್ದಳೆಯಲ್ಲಿ ಡಾ. ಶ್ರೀ ಪ್ರಕಾಶ್ ಬಂಗಾರಡ್ಕ...

ವಿಕಸಿತ ಭಾರತಕ್ಕೆ ಭದ್ರ ತಳಹದಿ : ನಳಿನ್‌ ಕುಮಾರ್ ಕಟೀಲ್

ಮಂಗಳೂರು : ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸಲು ಈ ಬಜೆಟ್ ಭದ್ರ ತಳಹದಿಯಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ, ದೇಶದ...

ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸುವ ಯುವಶಕ್ತಿ ಆಧಾರಿತ ಬಜೆಟ್ : ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ...

ಬಿ.ಸಿ.ರೋಡ್ : ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ:  ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಮಹಾಕಾಳಿಬೆಟ್ಟು ಮೈದಾನದಲ್ಲಿ ಭಾನುವಾರ ಸಂಜೆ ಹಿಂದು ಸಂಗಮ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ಶಂಖ, ಕಲಶ, ಭಾರತಮಾತೆಯ ಭಾವಚಿತ್ರದ ವಾಹನ, ವೀರ ಪುರುಷರ ವೇಷ, ಚೆಂಡೆ,...