Wednesday, February 12, 2025

ವಿಟ್ಲ: ಬಂದ್‌ಗೆ ನೀರಸ ಪ್ರತಿಕ್ರಿಯೆ

ವಿಟ್ಲ: ಭಾರತ ಬಂದ್‌ನ ಬಿಸಿ ವಿಟ್ಲದಲ್ಲಿ ಕೊಂಚ ಮಟ್ಟಿಗಷ್ಟೇ ತಟ್ಟಿದ್ದು ಕಂಡು ಬಂದಿತು. ಹೆಚ್ಚಿನ ಖಾಸಗಿ ಬಸ್ಸುಗಳು, ಕೆಲವು ಟ್ಯಾಕ್ಸಿ, ಕೆಲ ಅಟೋ ರಿಕ್ಷಾಗಳನ್ನು ಬಿಟ್ಟರೆ ಸರಕಾರಿ ಬಸ್ಸುಗಳು ಹಾಗೂ ಇತರ ಖಾಸಗಿ ವಾಹನಗಳು ಮಾಮೂಲಿಯಂತೆ ಸಂಚರಿಸುತ್ತಿದ್ದವು. ಆದರೆ ಪೇಟೆಯ ಅಂಗಡಿ ಮುಗ್ಗಟ್ಟುಗಳು ಅರ್ಧದಷ್ಟು ಬಾಗಿಲು ಮುಚ್ಚಿದ್ದವು. ಹಾಲು, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹೋಟೆಲ್‌ಗಳು, ಬಾರ್, ವೈನ್‌ಶಾಪ್‌ಗಳು ಎಂದಿನಂತೆ ವ್ಯವಹಾರ ನಡೆಸಿದವು. ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರಿಂದ, ಬಂದ್‌ನ ಬಗ್ಗೆ ಮೊದಲೇ ತಿಳಿದಿದ್ದ ಕಾರಣ ಪೇಟೆಯಲ್ಲಿ ಜನ ಸಂಚಾರ, ವ್ಯವಹಾರ ಕಡಿಮೆಯಾಗಿತ್ತು. ವಿಟ್ಲ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೇ ಬಂದ್ ಶಾಂತವಾಗಿತ್ತು.


ಎಂದಿನಂತೆ ನಡೆದ ವಾರದ ಸಂತೆ: ವಿಟ್ಲದಲ್ಲಿ ಮಂಗಳವಾರ ವಾರದ ಸಂತೆ ದಿನವಾಗಿದ್ದ ಕಾರಣ ಸಂತೆ ಮಾರುಕಟ್ಟೆಯಲ್ಲಿ ಸಂತೆ ವ್ಯವಹಾರ ಎಂದಿನಂತೆ ನಡೆಯಿತು. ಬಂದ್‌ನ ಬಿಸಿ ಸಂತೆಗೆ ಮುಟ್ಟಲೇ ಇಲ್ಲ. ಸಂತೆಗೆ ಸರಕು ಮಾಮೂಲಿಯಂತೆ ಬಂದಿತ್ತು. ಹಸಿ ತರಕಾರಿ ಕಾಯಿಪಲ್ಲೆ, ಹಣ್ಣುಹಂಪಲು, ದಿನಸಿ, ಒಣಮೀನು ಎಲ್ಲವೂ ಸಂತೆಯೊಳಗೆ ಇದ್ದ ಕಾರಣ ಬಂದ್ ಎಂದು ಗೊತ್ತಾಗುತ್ತಿರಲಿಲ್ಲ. ಆದರೆ ವ್ಯಾಪಾರ, ವ್ಯವಹಾರದ ಬಿರುಸುತನ ಕಡಿಮೆಯಾಗಿತ್ತು. ಸಂತೆ ಬರುವವರು ಬರುತ್ತಲೇ ಇದ್ದರು.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...