Friday, June 27, 2025

ವಿಟ್ಲ ಲಯನ್ಸ್ ನೂತನ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ

ವಿಟ್ಲ : ಲಯನ್ಸ್ ಸೇವಾ ಸಂಸ್ಥೆಯ ಲಯನ್ಸ್ 317ಡಿ ಜಿಲ್ಲೆ, ವಿಟ್ಲ ಲಯನ್ಸ್ ಟ್ರಸ್ಟ್ ರಿ. ವತಿಯಿಂದ ವಿಟ್ಲ ಲಯನ್ಸ್ ಕ್ಲಬ್‌ನ ನೂತನ ಕಚೇರಿಯ ಕಟ್ಟಡದ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ಶುಕ್ರವಾರ ಒಕ್ಕೆತ್ತೂರು ಸೇತುವೆ ಬಳಿಯ ಟ್ರಸ್ಟ್ ನಿವೇಶನದಲ್ಲಿ ನೆರವೇರಿತು.
ವಿಟ್ಲ ಲಯನ್ಸ್ ಟ್ರಸ್ಟ್ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಶಂಕುಸ್ಥಾಪನೆ ನೆರವೇರಿಸಿದರು. ವೇ.ಮೂ ವಿಕಾಸ್ ಭಟ್ ಅವರು ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಲಯನ್ಸ್ ಸದಸ್ಯರು ಕಟ್ಟಡಕ್ಕೆ ದೇಣಿಗೆ ಹಸ್ತಾಂತರಿಸಿದರು.
ಲಯನ್ಸ್ ಜಿಲ್ಲೆ ಉಪಗವರ್ನರ್-ಟ್ರಸ್ಟ್ ಕಾರ್ಯದರ್ಶಿ ಡಾ.ಗೀತಪ್ರಕಾಶ್, ಕೋಶಾಧಿಕಾರಿ ಎಂ.ರಾಧಾಕೃಷ್ಣ ನಾಯಕ್, ಡಿಜಿ ಪ್ರೋಗ್ರಾಮ್ ಮುಖ್ಯ ಜಿಲ್ಲಾ ಕೋಆರ್ಡಿನೇಟರ್ ಗೋವರ್ಧನ್ ಕೆ.ಶೆಟ್ಟಿ, ಮಹಿಳಾ ಸಶಕ್ತೀಕರಣ ಕೋಆರ್ಡಿನೇಟರ್ ಸುಪ್ರೀತಾ ಜಿ.ಶೆಟ್ಟಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ, ಕಾರ್ಯದರ್ಶಿ ಮನೋಜ್ ಕುಮಾರ್ ರೈ, ಕೋಶಾಧಿಕಾರಿ ಮಹಮ್ಮದ್ ಖಲಂದರ್, ಲಯನ್ಸ್ ಮುಖಂಡರಾದ ಸಿ.ವಿ.ಗೋಪಾಲಕೃಷ್ಣ, ಎಂ.ಹರೀಶ್ ನಾಯಕ್, ಸದಾಶಿವ ಆಚಾರ್ಯ ಕೈಂತಿಲ, ಶಾಂತಾರಾಮ ಶೆಟ್ಟಿ ಬಿ., ದೇಜಪ್ಪ ಪೂಜಾರಿ ನಿಡ್ಯ, ಉಗ್ಗಪ್ಪ ಶೆಟ್ಟಿ ಕೊಂಬಿಲ, ಡಾ.ಇರ್ಮಾಡಿ ಶರಶ್ಚಂದ್ರ ಶೆಟ್ಟಿ, ನೋಟರಿ ಅಬೂಬಕ್ಕರ್, ವಿ.ಎನ್.ಸುದರ್ಶನ್ ಪಡಿಯಾರ್, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಜಯಾ ವಿ.ರೈ, ವಿನ್ನಿ ಮಸ್ಕೇನ್ಹಸ್, ಜೆಸಿಂತಾ ಸೋಫಿಯ ಮಸ್ಕರೇನ್ಹಸ್, ಭಾರತೀ ಪ್ರಕಾಶ್, ಡಾ.ಗಾಯತ್ರಿ ಜಿ.ಪ್ರಕಾಶ್, ವಿಟ್ಲ ಮಂಗೇಶ್ ಭಟ್, ವಿ.ಎಸ್.ಕೆದಿಲಾಯ, ದೇವಿಪ್ರಸಾದ್ ಶೆಟ್ಟಿ, ಗಂಗಾಧರ, ಸುದೇಶ್ ಎಸ್.ಭಂಡಾರಿ, ವಿಮಲಾ ಶೆಟ್ಟಿ, ಪ್ರಭಾಕರ ಆಚಾರ್ಯ, ಲಕ್ಷ್ಮಣ್, ಜಲಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

More from the blog

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...