ವಿಟ್ಲ: ವಿಟ್ಲದ ವಿದ್ಯಾ ಸಂಘದ ಅಧೀನದಲ್ಲಿರುವ ವಿಠಲ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ನಂದಿತಾ ಕೆ. ಅವರು ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆ ನಡೆಸಿದ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಸ್ಪರ್ಧೆಯಲ್ಲಿ ಸೃಜನಾತ್ಮಕ ಬರವಣಿಗೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಈಕೆ ಪುತ್ತೂರು ತಾಲೂಕಿನ ಬುಳೇರಿಕಟ್ಟೆ ನಿವಾಸಿ ಮಹಾಲಿಂಗ ಮತ್ತು ವಸಂತಿ ದಂಪತಿಗಳ ಪುತ್ರಿ. ಸದಸ್ಯ ವಿಟ್ಲದ ಅನಿಲಕಟ್ಟೆ ನಿವಾಸಿ ಮಮತಾ ಅವರ ಮನೆಯಲ್ಲಿ ವಾಸ ಮಾಡುತ್ತಿದ್ದಾಳೆ.
