ವಿಟ್ಲ: ಕೇಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ದುಪದವು ಎಂಬಲ್ಲಿ ಶ್ರೀ ಮಹಮ್ಮಾಯಿ ಮರಾಟಿ ಸಮುದಾಯ ಭವನದ ಬಳಿ ಶೌಚಾಲಯ ನಿರ್ಮಾಣಕ್ಕಾಗಿ ಸ್ವಚ್ಚ ಭಾರತ್ ಮಿಶನ್ ಯೋಜನೆಯಡಿ ೪.೦೦ ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಈ ಕಾಮಗಾರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪುಣಚಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಶ್ರೀ ಕೋಡಂದೂರು. ತಾಲೂಕು ಪಂಚಾಯಿತಿ ಸದಸ್ಯರಾದ ಕವಿತ ಎಸ್. ನಾಯ್ಕ, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಾರಾನಾಥ ಆಳ್ವ ಕುಕ್ಕೆಬೆಟ್ಟು ಉಪಾಧ್ಯಕ್ಷರಾದ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಪಂಚಾಯಿತಿ ಸದಸ್ಯರಾದ ವಿಠಲ ನಾಯ್ಕ ಕೋಪ್ರೆ. ಅಬ್ಬುಲ್ ಕರೀಂ ಕುದ್ದುಪದವು. ಪುಷ್ಪಾಕರ ರೈ ಚೆಲ್ಲಡ್ಕ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹರಿಪ್ರಸಾದ್ ಯಾದವ್ ಅಡ್ಯನಡ್ಕ, ಮಾಜಿ ಪಂಚಾಯತ್ ಅಧ್ಯಕ್ಷ ಬಾಲಚಂದ್ರ ನಾಯಕ್ ಕಟ್ಟೆ, ಮಾಜಿ ಸದಸ್ಯ ಗೋವಿಂದ ನಾಯ್ಕ ಬಡಕ್ಕೋಡಿ, ರಾಜೇಶ್ ಕರವೀರ, ಪುಣಚಾ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರು ರಾಜೀವ ಭಂಡಾರಿ ಮಣಿಪದವು. ಗುತ್ತಿಗೆದಾರರು ಎಸ್. ನಾರಾಯಣ ಮಾಣಿಲ ಮತ್ತು ಕೇಪು ಗ್ರಾಮ ಪಂಚಾಯಿತಿ ಕ್ಲರ್ಕ್ ಸುರೇಶ್ ನಾಯ್ಕ ಕೋಡಂದೂರು ಉಪಸ್ಥಿತರಿದ್ದರು.
