ವಿಟ್ಲ: ವಿ.ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ವಿಟ್ಲದ ವಿ.ಎಚ್.ಕಾಂಪ್ಲೆಕ್ಸ್ನಲ್ಲಿ ದಾವತ್ ಎ ರಮದಾನ್ ಕಾರ್ಯಕ್ರಮವು ಸೋಮವಾರ ನಡೆಯಿತು.
ವಿಟ್ಲದಲ್ಲಿ ಪ್ರಥಮವಾಗಿ ಆರಂಭಿಸಿದ ಸಾರ್ವಜನಿಕ ಇಫ್ತಾರ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ದೊರಕಿದ್ದು, ನಾಡಿನ ಸೌಹಾರ್ದತೆ, ಏಕತೆ ಹಾಗೂ ಸಮುದಾಯದ ಸಬಲೀಕರಣಕ್ಕೆ ಯುವಕರ ತಂಡ ದಾವತ್ ಎ ರಮದಾನ್ ಮೂಲಕ ಮುನ್ನುಡಿ ಬರೆದಿದ್ದಾರೆ ಎಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ಹೇಳಿದರು.
ಮಾಲಿಕುದ್ದೀನಾರ್ ಸಂಸ್ಥೆಯ ವಿದ್ಯಾರ್ಥಿ ನೌಫಾಲ್ ಕಡಂಬು ರಂಝಾನ್ ಸಂದೇಶ ನೀಡಿ ಪವಿತ್ರ ತಿಂಗಳ ಮಹತ್ವವನ್ನು ವಿವರಿಸಿದರು. ವಿಟ್ಲ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ವಿ.ಎಚ್. ಅಶ್ರಫ್, ಸಂಘಟಕರಾದ ಶಾಕಿರ್ ಅಳಕೆಮಜಲು, ಉಬೈದ್ ವಿಟ್ಲ ಬಝಾರ್, ಕಲಂದರ್ ಪರ್ತಿಪ್ಪಾಡಿ, ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ, ಅದ್ದು ದೀಪಕ್, ಇಸಾಕ್ ಏರೋ, ಅಶ್ಫಾಕ್ ಮೇಗಿನಪೇಟೆ, ಅಶ್ರಫ್ ಸೆಲೆಕ್ಟ್, ಸಂಶುದ್ದೀನ್ ಹೋಂ ಟೆಚ್, ದಾವೂದು ಒಕ್ಕೆತ್ತೂರು, ಅಬೂಬಕರ್ ಅನಿಲಕಟ್ಟೆ, ಅಝೀಝ್ ಕಡಂಬು, ಇಕ್ಬಾಲ್ ಶೀತಲ್, ಉಮರ್ ಎಡ್ವಕೇಟ್, ಹಾರಿಸ್ ಕೊಡಂಗಾಯಿ ಮೊದಲಾದವರು ಉಪಸ್ಥಿತರಿದ್ದರು.
ಶಾಕಿರ್ ಅಳಕೆಮಜಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
