ವಿಟ್ಲ: ಜಾಗದ ತಕರಾರು ಬಗೆಹರಿಸಲು ಹೋದ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರ ಮೇಲೆ ದಾಳಿ ಮಾಡಿದ್ದೂ ಅಲ್ಲದೆ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಕೊಳ್ನಾಡು ಗ್ರಾಮದ ತಾಳಿತ್ತನೂಜಿಯಲ್ಲಿ ಬುಧವಾರ ನಡೆದಿದೆ.

ವಿಟ್ಲ ಹೋಳಿ ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳ್ಯ ಅವರ ಮೇಲೆ ಕೋಡಪದವು ನಿವಾಸಿ ಇಸುಬು ಎಂಬಾತ ಗುಂಪು ಕಟ್ಟಿಕೊಂಡು ದಾಳಿಯನ್ನು ನಡೆಸಿದ್ದಾನೆ. ಕಲಂ144 ಜಾರಿಯಲ್ಲಿರುವ ಸಮಯದಲ್ಲಿ ಗುಂಪು ಸೇರಿಕೊಂಡು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭ ದಾಳಿಯನ್ನು ನಡೆಸಿ ಗಾಯಗೊಳಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

