ವಿಟ್ಲ: ಮೂರು ದಿನಗಳ ಹಿಂದೆ ಖರೀದಿಸಿ ತಂದ ದನ ಕರುವನ್ನು ಕಳ್ಳತನ ಮಾಡಿದ ಘಟನೆ ಕೊಳ್ನಾಡು ಸೆರ್ಕಳದಲ್ಲಿ ನಡೆದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಧನಂಜಯ ಕುಮಾರ್ ಎಸ್.(27) ಎಂಬವರಿಗೆ ಸೇರಿದ ದನ ಕಳವಾಗಿದೆ. ಅಡ್ಯನಡ್ಕ ಕೂಟೇಲು ಎಂಬಲ್ಲಿಂದ 3 ದಿನದ ಹಿಂದೆ ಒಂದು ಕಪ್ಪು ಬಣ್ಣದ ಹಸು ಹಾಗೂ ಒಂದು ಕರುವನ್ನು ಸಾಕಲು ತಂದಿದ್ದು, ಎಂದಿನಂತೆ ಗುರುವಾರ ರಾತ್ರಿ ಕಟ್ಟಿ ಹಾಕಿದ್ದು, ಶುಕ್ರವಾರ ಮನೆಯ ಎದುರು ಕಟ್ಟಿ ಹಾಕಿದ್ದ ಹಸು, ಕರು ಕಾಣೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

