ಉಡುಪಿಯ ಕೃಷ್ಣನ ಸನ್ನಿಧಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ವಂಶಿಕಾ ಹಿರಣ್ಯಕಶ್ಯಪಿನ ಡೈಲಾಗ್ ಹೇಳುತ್ತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.


ಇತ್ತೀಚೆಗಷ್ಟೇ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ರಲ್ಲಿ ವಂಶಿಕಾ ಹಿರಣ್ಯಕಶ್ಯಪು ಪಾತ್ರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಳು. ಇದೀಗ ನರಸಿಂಹದೇವರ ಆರಾಧಕರಾಗಿರುವ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ತೊಡೆಯ ಮೇಲೆ ಪ್ರಹ್ಲಾದನಂತೆ ಕುಳಿತಿರುವ ವಂಶಿಕಾ, ಹಿರಣ್ಯ ಕಶ್ಯಪುವಿನ ಡೈಲಾಗ್ ಹೇಳಿದ್ದು, ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಕಡೆಯಿಂದ ಶಹಭಾಷ್ ಗಿರಿ ಪಡೆದುಕೊಂಡಿದ್ದಾಳೆ.












