ಬಂಟ್ವಾಳ : ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ


ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಕೊರೋನಾ ನಿಯಂತ್ರಣ ಪಲ್ಸ್ ಆಕ್ಸೀಮೀಟರ್ ಮತ್ತು ಕೊಡೆ ವಿತರಣಾ ಕಾರ್ಯಕ್ರಮ ಸಮುದಾಯ ಆರೋಗ್ಯ ಕೇಂದ್ರದ ಸಭಾ ಭವನದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಚೌಟ ಅವರು ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್ ಅಡ್ಯಂತಾಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ರಾಜೇಂದ್ರ, ಕಾರ್ಯದರ್ಶಿ ಭಾಸ್ಕರ,ಸದಸ್ಯರಾದ ರವಿರಾಮ ಶೆಟ್ಟಿ,ವಾಸು ಮುಗೇರ , ವಿನೋದ ಸಾಲ್ಯಾನ್ , ಹಾ.ಉ.ಸಂಘದ ನಿರ್ದೇಶಕರಾದ ಶ್ಯಾಮ್ ಪ್ರಸಾದ್ ಪೂಂಜ , ವಿಶ್ವನಾಥ್ ಶೆಟ್ಟಿ, ಬೇಬಿ ಗೌಡ,ಪ್ರಕಾಶ್ ಶೆಟ್ಟಿ, ಸುರೇಶ್ ಗಟ್ಟಿ ,ಧರ್ಣಪ್ಪ ನಾಯ್ಕ ,ದಿನೇಶ್ ಸಾಲ್ಯಾನ್ ,ಲೀಲಾವತಿ ರೈ ,ಆನಂದೀ ಪೂಜಾರಿ,ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಶೆಟ್ಟಿ, ಸಿಬಂದಿಗಳಾದ ಯಶೋಧರ,ಗುರುಪ್ರಸಾದ್,ಹರಿಶ್ಚಂದ್ರ, ಲೀಲಾಕ್ಷಿ,ಚೆನ್ನೈತ್ತೋಡಿ ಶಾಲಾ ಶಿಕ್ಷಕ ಭರತ್ ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಅನಂತರಾಮ ನಾಯಕ್ ಸ್ವಾಗತಿಸಿ ನಿರೂಪಿಸಿದರು.












