ಬಂಟ್ವಾಳ: ಮಂಚಿ-ಇರಾ ಹಾಗೂ ಸಜಿಪ ನಡು ಗ್ರಾಮಗಳನ್ನು ಸಂಪರ್ಕಿಸುವ ಕುಕ್ಕಾಜೆ-ಪತ್ತುಮುಡಿ-ಚಟ್ಟೆಕಲ್-ಇರಾ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸುವ 1 ಕೋಟಿ 95 ಲಕ್ಷ ರೂಪಾಯಿ ಅಂದಾಜು ಮೊತ್ತದ ಕಾಮಗಾರಿಗೆ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವದಿಯಲ್ಲಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳು ಮಂಜೂರುಗೊಂಡಿದ್ದು, ಪ್ರಸಕ್ತ ಕಾರ್ಯರೂಪಗೊಳ್ಳುತ್ತಿರುವುದು ಸಂತಸವಾಗುತ್ತಿದೆ ಎಂದರು.


ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಕೊಳ್ನಾಡು ಜಿಲ್ಲಾ ಪಂಚಾಯತ್ ಸದಸ್ಯ ಎಮ್.ಎಸ್. ಮಹಮ್ಮದ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ಶಮಿಯುಲ್ಲಾ, ಜಿ.ಎಮ್.ಇಬ್ರಾಹಿಂ, ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಹಮಾನ್ ಕುಕ್ಕಾಜೆ, ಗಣ್ಯರಾದ ಅರುಣ್ ಡಿಸೋಜ ಮುಡಿಪು, ಉಸ್ಮಾನ್ ಕುಕ್ಕಾಜೆ, ಮೊಹಮ್ಮದ್ ಪದವು, ಸಿರಾಜ್ ಪದವು, ಮಹಮ್ಮದ್ ಇರಾ, ಮೊಯಿದಿನ್ ಕುಂಞಿ ದರ್ಭೆ, ಇಬ್ರಾಹಿಂ ಕುಕ್ಕಾಜೆ, ಇನ್ನಿತರರು ಪಾಲ್ಗೊಂಡಿದ್ದರು.












