ಮಂಗಳೂರು: ಇತ್ತೀಚಿಗೆ ನಡೆದ ಉಳ್ಳಾಲ ನಗರ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ., ಎಸ್.ಡಿ.ಪಿ.ಐ. ಹಾಗೂ ಕಾಂಗ್ರೆಸ್ ಪಕ್ಷಗಳ ತ್ರಿಕೋನ ಸ್ಪರ್ಧೆ ಉಂಟಾಗಿತ್ತು. ಈಗ ಅದರ ಫಲಿತಾಂಶ ಪ್ರಕಟಗೊಂಡಿದ್ದು, ಉಳ್ಳಾಲ ನಗರಸಭಾ ಆಡಳಿತ ಕಾಂಗ್ರೆಸ್ ಗೆ ಸಿಕ್ಕಿದೆ. ಅಧ್ಯಕ್ಷರಾಗಿ ಚಿತ್ರಕಲಾ ಚಂದ್ರಕಾಂತ್, ಉಪಾಧ್ಯಕ್ಷರಾಗಿ ಆಯುಬ್ ಮಂಚಿಲ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಇಬ್ಬರಿಗೂ ಶಾಸಕ ಯು.ಟಿ. ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ.



ನ್ಯಾಯಾಲಯ ಹೊರಡಿಸಿದ್ದ ತಡೆಯಾಜ್ಞೆ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಖಾಲಿ ಉಳಿದಿದ್ದ ಉಳ್ಳಾಲ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ನವೆಂಬರ್ 2 ರ ಸೋಮವಾರ ಮಧ್ಯಾಹ್ನ 1.30 ಗಂಟೆಗೆ ಚುನಾವಣೆ ನಡೆಯಿತು. ಕಾಂಗ್ರೆಸ್ನ ಚಿತ್ರ ಚಂದ್ರಕಾಂತ್ ಮತ್ತು ಅಯೂಬ್ ಮಂಚಿಲ, ಎಸ್ಡಿಪಿಐನಿಂದ ಝರೀನಾ ಬಾನು ಹಾಗೂ ಬಿಜೆಪಿಯಿಂದ ರೇಷ್ಮಾ ಜಗದೀಶ್ ಅಧ್ಯಕ್ಷ ಸ್ಥಾನಕ್ಕೆ, ಜೆಡಿ (ಎಸ್) ನ ರಮೀಝ್ ಕೋಡಿ, ಜಬ್ಬರ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇಂದು ಚುನಾವಣೆ ನಡೆದಿದ್ದು, ಎರಡು ಸ್ಥಾನಗಳು ಕೂಡಾ ಕಾಂಗ್ರೆಸ್ ಗೆ ಸೇರಿದೆ.












