Tuesday, February 11, 2025

ಧರ್ಮಸ್ಥಳ: ಪಂಚಮಹಾ ವೈಭವ- ಆದಿನಾಥರಿಗೆ ವೈರಾಗ್ಯ

ಉಜಿರೆ: ಅಮರಾವತಿಯಲ್ಲಿ ದೇವೇಂದ್ರನ ಒಡ್ಡೋಲಗದಲ್ಲಿ ಸಿಂಹಾಸನ ಕಂಪಿಸುತ್ತದೆ. ಆದಿನಾಥರಿಗೆ (ವೃಷಭರಾಜ) ತೀರ್ಥಂಕರರಾಗುವ ಕ್ಷಣ ಸಮೀಪಿಸುತ್ತಿದೆ ಎಂದು ತಿಳಿದ ದೇವೇಂದ್ರ ಅಯೋಧ್ಯೆಗೆ ಹೋಗಿ ಆದಿನಾಥರ ಅರಮನೆಯಲ್ಲಿ ನೀಲಾಂಜನೆಯ ನೃತ್ಯವನ್ನು ಏರ್ಪಡಿಸುತ್ತಾನೆ. ಆಯುಷ್ಯ ಮುಗಿದ ನೀಲಾಂಜನೆ ನೃತ್ಯ ಮಧ್ಯದಲ್ಲೇ ಸಾವನ್ನಪ್ಪುತ್ತಾಳೆ. ಆದರೆ ಈ ವಿಚಾರ ಆದಿನಾಥರಿಗೆ ತಿಳಿಯಬಾರದೆಂದು ಅದೇ ರೂಪದ ಇನ್ನೊಬ್ಬಳು ಕಲಾವಿದೆಯಿಂದ ನೃತ್ಯ ಮುಂದುವರಿಯುತ್ತದೆ.


ಆದಿನಾಥರಿಗೆ ಈ ದೃಶ್ಯ ನೋಡಿ ಲೌಕಿಕ ಸುಖ-ಭೋಗಗಳೆಲ್ಲ ಕ್ಷಣಿಕ ಎಂದು ವೈರಾಗ್ಯ ಭಾವನೆ ಮೂಡಿ ಬರುತ್ತದೆ. ಎಲ್ಲವನ್ನೂ ತ್ಯಜಿಸಿ ಕಾಡಿಗೆ ಹೋಗಲು ನಿರ್ಧರಿಸುತ್ತಾರೆ.
ಆದಿನಾಥ ಮಹಾರಾಜರು ಭರತನಿಗೆ ಅಯೋಧ್ಯೆಯ ಅಧಿಕಾರವನ್ನೂ, ಬಾಹುಬಲಿಗೆ ಪೌದನಾಪುರದ ಅಧಿಕಾರವನ್ನೂ ವಹಿಸಿಕೊಟ್ಟು ಹಿತೋಪದೇಶ ನೀಡುತ್ತಾರೆ. ಗುರು-ಹಿರಿಯರರನ್ನು ಗೌರವಿಸಿ. ಪ್ರಜೆಗಳನ್ನು ಪೀಡಿಸಬೇಡಿ. ಧರ್ಮ ಪಾಲನೆಯೊಂದಿಗೆ ಶಾಂತಿ-ಸಾಮರಸ್ಯ ಕಾಪಾಡಿ ಎಂದು ಸಲಹೆ ನೀಡಿ, ಎಲ್ಲವನ್ನೂ ತ್ಯಜಿಸಿ ತಪಸ್ಸಿಗೆ ಹೋಗುತ್ತಾರೆ.
ಕಲಾವಿದರ ಪ್ರೌಢ ಅಭಿನಯ, ಸಂವಹನ ಕಲೆ, ವೇಷ-ಭೂಷಣಗಳು, ಸುಸಜ್ಜಿತ ವೇದಿಕೆ-ಎಲ್ಲದರ ಸಮ್ಮಿಳನದಿಂದ ರೂಪಕ ಪ್ರೇಕ್ಷಕರ ಕಣ್ಮನ ಸೆಳೆಯಿತು.
ಪೂಜ್ಯ ಆಚಾರ್ಯ ವರ್ಧಮಾನ ಸಾಗರ್‌ಜಿ, ಪೂಜ್ಯ ಪುಷ್ಪದಂತ ಸಾಗರ ಮುನಿ ಮಹಾರಾಜ್ ಹಾಗೂ ಮುನಿ ಸಂಘದವರು, ಮಾತಾಜಿಯವರು ರೂಪಕ ವೀಕ್ಷಿಸಿ ಎಲ್ಲ ಕಲಾವಿದರನ್ನು ವಿಶೇಷವಾಗಿ ಆಶೀರ್ವದಿಸಿದರು.
ವಿಶೇಷವಾಗಿ ಪಂಚಮಹಾವೈಭವದ ಹೊಸ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಹಾಗೂ ಶ್ರದ್ಧಾ ಅಮಿತ್ ಅವರನ್ನು ಮುನಿಸಂಘದವರು ಅಭಿನಂದಿಸಿ ಆಶೀರ್ವದಿಸಿದರು.

More from the blog

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ...

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...