ಜೈಸ್ ಹೆ ಮಹಮ್ಮದ್ ಉಗ್ರ ಸಂಘಟನೆಯಿಂದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಗೆ ಹಾಗೂ ರಕ್ಷಿತ್ ಬುಡೋಳಿಗೆ ಜೀವ ಬೆದರಿಕೆ ನೀಡಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸಂಘದ ತಾಲೂಕು ಕಾರ್ಯವಾಹ ರಕ್ಷಿತ್ ಬುಡೊಲಿ ಯವರ ವಾಟ್ಸಪ್ ಗೆ ಪಾಕಿಸ್ತಾನ, ಅಫ್ಘಾನಿಸ್ಥಾನ, ಸೌದಿ ಅರೇಬಿಯ ದೇಶದ 3 ಮೊಬೈಲ್ ಸಂಖ್ಯೆಯಿಂದ ಮೆಸ್ಸೇಜ್ ಮತ್ತು ವಾಯ್ಸ್ ರೆಕಾರ್ಡ್ ಮಾಡಿ ಬೆದರಿಕೆ ಹಾಕಿದ್ದಾರೆ, ಈ ಬೆದರಿಕೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆಯ ಉಲ್ಲೇಖ ಮಾಡಲಾಗಿದೆ, ಮತ್ತು ಬಂಟ್ವಾಳದ ಕಾರ್ಯಕರ್ತನ ಮೊಬೈಲ್ ಸಂಖ್ಯೆ ಉಗ್ರರ ಕೈಗೆ ತಲುಪ ಬೇಕಾದರೆ ಬಂಟ್ವಾಳದಲ್ಲಿ ಉಗ್ರರು ಇರುವುದು ಸ್ವಷ್ಟ ಆಗುತ್ತಿದೆ, ಆದ್ದರಿಂದ ಸುಹಾಸ್ ಶೆಟ್ಟಿ ಪ್ರಕರಣವನ್ನು NIA ಗೆ ವಹಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

