Thursday, February 13, 2025

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಯ ವತಿಯಿಂದ 70ನೇ ಗಣರಾಜ್ಯೋತ್ಸವ

ಸದಾ ಸಮಾಜಮುಖಿ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಯ ವತಿಯಿಂದ
70ನೇ ಗಣರಾಜ್ಯೋತ್ಸವದ ಶುಭದಿನಂದಂದು ಸಮಾಜದ 4 ಅಶಕ್ತ ಕುಟುಂಬಗಳಿಗೆ 90,000 ರೂಪಾಯಿ ಧನ ಸಹಾಯ ಹಸ್ತಾಂತರ.

*ಹೃದಯದಲ್ಲಿ 3 ರಂಧ್ರಗಳಿಂದ* ಸರಿಯಾಗಿ ರಕ್ತ ಚಲಾವಣೆಯಾಗದೆ ಯಾತನೆ ಅನುಭವಿಸುತ್ತಿರುವ *ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಅಗರಿ ಪ್ರಕಾಶ್ ಮಿರಾಂದ ಮತ್ತು ರೇನಿಟಾ ದಂಪತಿಗಳ 4 ತಿಂಗಳ ಮಗು ರೋಯಿಸ್ಟನ್* ನ ಚಿಕಿತ್ಸೆಗೆoದು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದೆ ಮಗು. ಹೆತ್ತವರ ಕಷ್ಟಕ್ಕೆ ರೂ.20,000 ಚೆಕ್ *ಮೂಳೆ ಕ್ಯಾನ್ಸರ್* ನಿಂದ ಬಳಲುತ್ತಿರುವ *ಮಂಗಳೂರು ತಾಲೂಕು ಪಕ್ಷಿಕೆರೆ ಕಾಪಿಕಾಡ್ ಹರೀಶ್ ಭಾರತಿ ದಂಪತಿಗಳ 3 ವರುಷದ ಮಗ ಚೇತನ್* ನ ಚಿಕಿತ್ಸೆಗೆ ರೂ. 25,000 ಚೆಕ್, *ಕಣ್ಣಿನ ಅಂಧತ್ವದಿಂದ* ಅರ್ಧದಲ್ಲೇ ನಿಂತ *ಮಂಗಳೂರು ತಾಲೂಕು ಆಚಾರಿಜೇರ ಕಿಲೆಂಜಾರು ಝಕಾರಿಯರವರ* ಮನೆ ದುರಸ್ತಿಗೆ ಸಹಾಯಕ್ಕೆ ರೂ.20,000 ಚೆಕ್ ಮತ್ತು 4 ವರುಷಗಳ ಹಿಂದೆ ಅಪಘಾತದಲ್ಲಿ *ಎಡ ಕಾಲಿನ ಪಾದ* ಕಳೆದುಕೊಂಡು ಮತ್ತೆ ಅದು ಸರಿಯಾಗಿ ಗುಣಮುಖವಾಗದೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ *ಮಂಗಳೂರು ತಾಲೂಕು ಬಡಗಮಿಜಾರು ಅಂಗಡಿಗುತ್ತು ದಯಾನಂದ ಶೆಟ್ಟಿ ಮತ್ತು ಯಶೋಧರವರ ಮಗ ಅಂಬರೀಷ್* ರವರ ಚಿಕಿತ್ಸೆಗೆ ರೂ.25,000 ಚೆಕ್ ಅನ್ನು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಕಟೀಲು ಇಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...