ಬಂಟ್ವಾಳ: ಟ್ರಸ್ಟ್ ನಿಂದ ಸಹಾಯ ಮಾಡಲು ಸೇವಾ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ *ಕ್ಯಾನ್ಸರ್* ಖಾಯಿಲೆಯಿಂದ ಬಳಲುತ್ತಿದ್ದ *ಕಾರ್ಕಳ ತಾಲೂಕು ವಂಜರಕಟ್ಟೆ ದಾಸಂದಕಲ್ಲು ಬೋಳ ಹರೀಶ್ ಆಚಾರ್ಯ ಮತ್ತು ಆಶಾ ದಂಪತಿಗಳ ಪುತ್ರ ಗಗನ್* ರವರ ಚಿಕಿತ್ಸೆಗೆಂದು ನೀಡಬೇಕಾದ ರೂ. 20,000 ಚೆಕ್ ಅನ್ನು ಗಗನ್ ನ ಹೆತ್ತವರಿಗೆ, *ಮೆದುಳು ಮತ್ತು ನರ ದೌರ್ಬಲ್ಯ* ಸಮಸ್ಯೆಯಿಂದ ಬಳಲುತ್ತಿರುವ *ಬೆಳ್ತಂಗಡಿ ಕಕ್ಕಿಂಜೆ ದೊರ್ತಾಡಿಕೊಪ್ಪ ತೋಟತ್ತಾಡಿ ಹರೀಶ್ ಕುಲಾಲ್ ಮತ್ತು ಭವನಿ* ದಂಪತಿಗಳ ಮಕ್ಕಳಾದ *ಲಾವಣ್ಯ ಮತ್ತು ತನ್ವಿತ್* ಇವರಿಬ್ಬರ ಚಿಕಿತ್ಸೆಗೆ ರೂ.20,000 ಚೆಕ್ *ಮೆದುಳು* ಸಂಬಂಧಿತ ಖಾಯಿಲೆಯಿಂದ ತುತ್ತಾಗಿದ್ದ *ಮಂಗಳೂರು ಗಂಜಿಮಠ ಬಡಗುಳಿಪಾಡಿ ಗಾಂಧಿನಗರ ಸಂಜೀವ ಪೂಜಾರಿ ಮತ್ತು ಶೋಭಾ* ದಂಪತಿಗಳ ಮಗ *ಜಯರಾಮರವರ* ಚಿಕಿತ್ಸೆಗೆ ರೂ.20,000 ಚೆಕ್ ಹಾಗೂ *ಶ್ವಾಸಕೋಶದ ಕ್ಯಾನ್ಸರ್* ಸಮಸ್ಯೆಯಿಂದ ಬಳಲುತ್ತಿರುವ *ಬೆಳ್ತಂಗಡಿ ಗುಂಡೂರಿ ಪೆರ್ಲಾಪು ದಿವಾಂಗತ ರಾಜು ದೇವಾಡಿಗ ಮತ್ತು ವಾರಿಜ* ದಂಪತಿಗಳ ಮಗ *ಪದ್ಮಪ್ರಸಾದ್* ಇವರ ಚಿಕಿತ್ಸೆಗೆ ರೂ.20,000 ಚೆಕ್ ಧನ ಸಹಾಯ ಹಸ್ತಾಂತರ ನಮ್ಮ ಬೆದ್ರ ವಾರ ಪತ್ರಿಕೆ ಕಚೇರಿ ಮೂಡಬಿದ್ರೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೂಡಬಿದ್ರಿ ಪ್ರೆಸ್ ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ವಿಜಯಕರ್ನಾಟಕ ಪ್ರತಿನಿಧಿ ಸೀತಾರಾಮ ಆಚಾರ್ಯ ನಮ್ಮ ಬೆದ್ರ ಪತ್ರಿಕೆ ಸಂಪಾದಕ ಅಶ್ರಫ್ ವಾಲ್ಪಾಡಿ ಸಂಯುಕ್ತ ಕರ್ನಾಟಕ ಪ್ರತಿನಿಧಿ ಪ್ರೇಮ ಶ್ರೀ ಕಲ್ಲಬೆಟ್ಟು ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.