Thursday, February 13, 2025

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ 4 ಅಶಕ್ತ ಫಲಾನುಭವಿಗಳಿಗೆ ಧನ ಸಹಾಯ ಹಸ್ತಾಂತರ

ಬಂಟ್ವಾಳ: ಟ್ರಸ್ಟ್ ನಿಂದ ಸಹಾಯ ಮಾಡಲು ಸೇವಾ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ *ಕ್ಯಾನ್ಸರ್* ಖಾಯಿಲೆಯಿಂದ ಬಳಲುತ್ತಿದ್ದ *ಕಾರ್ಕಳ ತಾಲೂಕು ವಂಜರಕಟ್ಟೆ ದಾಸಂದಕಲ್ಲು ಬೋಳ ಹರೀಶ್ ಆಚಾರ್ಯ ಮತ್ತು ಆಶಾ ದಂಪತಿಗಳ ಪುತ್ರ ಗಗನ್* ರವರ ಚಿಕಿತ್ಸೆಗೆಂದು ನೀಡಬೇಕಾದ ರೂ. 20,000 ಚೆಕ್ ಅನ್ನು ಗಗನ್ ನ ಹೆತ್ತವರಿಗೆ, *ಮೆದುಳು ಮತ್ತು ನರ ದೌರ್ಬಲ್ಯ* ಸಮಸ್ಯೆಯಿಂದ ಬಳಲುತ್ತಿರುವ *ಬೆಳ್ತಂಗಡಿ ಕಕ್ಕಿಂಜೆ ದೊರ್ತಾಡಿಕೊಪ್ಪ ತೋಟತ್ತಾಡಿ ಹರೀಶ್ ಕುಲಾಲ್ ಮತ್ತು ಭವನಿ* ದಂಪತಿಗಳ ಮಕ್ಕಳಾದ *ಲಾವಣ್ಯ ಮತ್ತು ತನ್ವಿತ್* ಇವರಿಬ್ಬರ ಚಿಕಿತ್ಸೆಗೆ ರೂ.20,000 ಚೆಕ್ *ಮೆದುಳು* ಸಂಬಂಧಿತ ಖಾಯಿಲೆಯಿಂದ ತುತ್ತಾಗಿದ್ದ *ಮಂಗಳೂರು ಗಂಜಿಮಠ ಬಡಗುಳಿಪಾಡಿ ಗಾಂಧಿನಗರ ಸಂಜೀವ ಪೂಜಾರಿ ಮತ್ತು ಶೋಭಾ* ದಂಪತಿಗಳ ಮಗ *ಜಯರಾಮರವರ* ಚಿಕಿತ್ಸೆಗೆ ರೂ.20,000 ಚೆಕ್ ಹಾಗೂ *ಶ್ವಾಸಕೋಶದ ಕ್ಯಾನ್ಸರ್* ಸಮಸ್ಯೆಯಿಂದ ಬಳಲುತ್ತಿರುವ *ಬೆಳ್ತಂಗಡಿ ಗುಂಡೂರಿ ಪೆರ್ಲಾಪು ದಿವಾಂಗತ ರಾಜು ದೇವಾಡಿಗ ಮತ್ತು ವಾರಿಜ* ದಂಪತಿಗಳ ಮಗ *ಪದ್ಮಪ್ರಸಾದ್* ಇವರ ಚಿಕಿತ್ಸೆಗೆ ರೂ.20,000 ಚೆಕ್ ಧನ ಸಹಾಯ ಹಸ್ತಾಂತರ ನಮ್ಮ ಬೆದ್ರ ವಾರ ಪತ್ರಿಕೆ ಕಚೇರಿ ಮೂಡಬಿದ್ರೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೂಡಬಿದ್ರಿ ಪ್ರೆಸ್ ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ವಿಜಯಕರ್ನಾಟಕ ಪ್ರತಿನಿಧಿ ಸೀತಾರಾಮ ಆಚಾರ್ಯ ನಮ್ಮ ಬೆದ್ರ ಪತ್ರಿಕೆ ಸಂಪಾದಕ ಅಶ್ರಫ್ ವಾಲ್ಪಾಡಿ ಸಂಯುಕ್ತ ಕರ್ನಾಟಕ ಪ್ರತಿನಿಧಿ ಪ್ರೇಮ ಶ್ರೀ ಕಲ್ಲಬೆಟ್ಟು ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...