ಬಿ.ಸಿ.ರೋಡ್: ನನ್ನ ಕ್ಷೇತ್ರದಲ್ಲಿ ತುಂಬೆ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಸೌಹಾರ್ದತೆಯ ಕ್ಷೇತ್ರವಾಗಲಿ. ಈ ದೇವಸ್ಥಾನದಿಂದ ಸೌಹಾರ್ದತೆಯನ್ನು ನಿರ್ಮಾಣ ಮಾಡುವ ಶಕ್ತಿಕೇಂದ್ರವಾಗಲಿ, ಸೌಹಾರ್ದ ಮುಖಾಂತರ ಅಭಿವೃದ್ಧಿಯೂ ಆಗಿದೆ ರಾಜ್ಯವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ತಿಳಿಸಿದರು.

ಅವರು ನೂತನವಾಗಿ ನಿರ್ಮಾಣವಾದ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಫೆಬ್ರವರಿ ೧೮ರಂದು ಪುನಃಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಮಾತನಾಡಿ ಒಂದು ಬ್ರಹ್ಮಕಲಶೋತ್ಸವ ಮಾಡುವುದು, ನೋಡುವುದು ಪೂರ್ವಜನ್ಮದ ಪುಣ್ಯದ ಫಲ, ಭಗವಂತನ ಇಚ್ಚೆಯಿಂದ ಈ ಧರ್ಮಕಾರ್ಯ ನಡೆಯುತ್ತಿದೆ. ಈ ಗ್ರಾಮದಲ್ಲಿ ನಿರಂತರವಾಗಿ ಶಿವನನ್ನು ಆರಾಧನೆಯನ್ನು ಮಾಡಿರುವುದರಿಂದ ಈ ಪ್ರದೇಶದಲ್ಲಿ ಪರಮೇಶ್ವರ ನೆಲೆಯಾಗಿದ್ದು ಈ ಊರಿನ ಪುಣ್ಯದ ಫಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಭಾಧ್ಯಕ್ಷತೆಯನ್ನು ಉದ್ಯಮಿ ಪ್ರಕಾಶ ಕಾರಂತ ನರಿಕೊಂಬು ವಹಿಸಿದ್ದರು.
ವೇದಿಕೆಯಲ್ಲಿ ಉದ್ಯಮಿ ಬಿಪಿನ್ ರೈ ಮಂಗಳೂರು, ಭಾರತ್ ಆಗ್ರೋವೇಟ್ ಲಿ ಆಡಳಿತ ನಿರ್ದೇಶಕ ಡಾ.ಅರುಣ್ ಕುಮಾರ್ ರೈ, ಓರಿಯೆಂಟಲ್ ಇನ್ಶೂರೆನ್ಸ್ ನಿವೃತ್ತ ರೀಜಿನಲ್ ಮ್ಯಾನೇಜರ್ ಬಿ ಸುಧಾಕರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಅಧ್ಯಕ್ಷ ಸುದರ್ಶನ್ ಜೈನ್, ಮಹೇಶ್ ಭಟ್ ಮಾಜಿ ಟ್ರಸ್ಟಿ ಶ್ರೀ ಕ್ಷೇತ್ರ ಸುಬ್ರಮಣ್ಯ, ಜೀರ್ಣೋದ್ದಾರ ಹಾಗೂ ಬ್ರಹ್ಮಕಲಸ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ, ರಾಮಚಂದ್ರ ಸುವರ್ಣ ತುಂಬೆ ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಸಂಚಾಲಕ ಪ್ರವೀಣ್ ಬಿ ತುಂಬೆ ಸ್ವಾಗತಿಸಿ, ಶಶಿಧರ ಬ್ರಹ್ಮರಕೊಟ್ಲು ಧನ್ಯವಾದವಿತ್ತರು, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.