ತುಂಬೆ: ತುಂಬೆ ಡ್ಯಾಮಿನಲ್ಲಿ 7 ಮೀಟರ್ ನೀರು ಸಂಗ್ರಹಿಸಲು ಮುಳುಗಡೆ ಜಮೀನಿನ ಸರ್ವೆ ಕಾರ್ಯಕ್ಕೆ ನಗರಪಾಲಿಕೆ ವತಿಯಿಂದ ಸರ್ವೇ ಕಾರ್ಯಕ್ಕೆ ಸಜೀಪಮುನ್ನೂರು ಗ್ರಾಮದ ಮಲಾಯಿ ಬೆಟ್ಟು ಪ್ರದೇಶಕ್ಕೆ ಸರ್ವೆ ಸಿಬ್ಬಂದಿಗಳು ಆಗಮಿಸಿದ್ದರು ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಹಾಗೂ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಂತ್ರಸ್ತ ರೈತರು ಒಟ್ಟು ಸೇರಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿಗಳನ್ನು ಹಿಂದಕ್ಕೆ ಕಳುಹಿಸಿದರು. ಈಗಾಗಲೇ ಐದು ಮೀಟರ್ ಹಾಗೂ 6 ಮೀಟರ್ ನೀರು ಸಂಗ್ರಹಗೊಂಡಾಗ ಸಂತ್ರಸ್ತ ರೈತರಿಗೆ ಎಲ್ಲಾ ದಾಖಲೆಗಳನ್ನು ಒದಗಿಸಿದರು. ಈ ತನಕ ಪರಿಹಾರ ಸಿಕ್ಕಿರುವುದಿಲ್ಲ ಹಾಗೂ ಸರ್ವೆಯ ಬಗ್ಗೆ ಜಮೀನುದಾರರಿಗೆ ಪೂರ್ವ ಮಾಹಿತಿ ನೀಡಿ ಸರ್ವೆಯ ಆದೇಶ ಪತ್ರವನ್ನು ನೀಡಿ ಸರ್ವೇ ಕಾರ್ಯ ನಡೆಸಬೇಕೆಂದು ತಿಳಿಸಲಾಯಿತು. ರೈತ ಮುಖಂಡರಾದ ಲಕ್ಷ್ಮಣ ನರಿಕೊಂಬು, ಸುದೇಶ್ ಮೈಯ್ಯ, ಪಾಣೆಮಂಗಳೂರು ಇದ್ದಿನಬ್ಬ ಕೊಪ್ಪಳ ನಂದಾವರ ಅಣ್ಣಪ್ಪಯ್ಯ ಬುಕಸ ಇಕ್ಬಾಲ್ ಪಡ್ಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ಶಿವರಾಮ ಬಾ ಸೀತಾಯ ಅದ್ರು ಕು. ಧನಂಜಯ ಶೆಟ್ಟಿ ಪರಾರಿಗುತ್ತು ಪ್ರಸಾದ್ ಶೆಟ್ಟಿ ಧೀರಜ್ ಶೆಟ್ಟಿ ಚಿತ್ರ ಎಸ್. ರೈ, ಅಬ್ದುಲ್ ರಹಿಮಾನ್ ಉದ್ದೊಟ್ಟು ಮೊದಲಾದವರು ಉಪಸ್ಥಿತರಿದ್ದರು.
