ಬಂಟ್ವಾಳ : ಬೊಳ್ಳಾರಿ ತುಂಬೆ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ “ಅನ್ನ ಪ್ರಶಾನ” ಕಾರ್ಯಕ್ರಮ ವನ್ನು ನಡೆಸಲಾಯಿತು.


ಈ ಕಾರ್ಯಕ್ರಮ ದಲ್ಲಿ ಪಂಚಾಯತ್ ಸದಸ್ಯರಾದ ಹೇಮಲತಾ ಜಿ. ಪೂಜಾರಿ, ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಶಕುಂತಳಾ, ಆಶಾಕಾರ್ಯಕರ್ತೆ ರೋಹಿಣಿ, ಸಂಜೀವಿನಿಯ ಎಂ. ಬಿ. ಕೆ. ಯವರಾದ ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಕಾರ್ಯಕ್ರಮ ಸಂಯೋಜನೆ ಮಾಡಿದರು. ಅಂಗನವಾಡಿ ಸಹಾಯಕಿ ಉಷಾ ವಂದನಾರ್ಪಣೆ ಮಾಡಿದರು.

