Wednesday, February 12, 2025

ಬೈಕಿನಲ್ಲಿ ಬಂದ ಅಪರಿಚಿತರಿಂದ ವಂಚಿಸಿ ಪರಾರಿ.

 

ಬಂಟ್ವಾಳ: ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಬಿಸಿರೋಡಿನ ಗಾಣದಪಡ್ಪು ಅಂಗಡಿಯೊಂದರಲ್ಲಿ  ಸಿಗರೇಟ್ ಕೊಂಡು ಹಣ ನೀಡದೇ ಪರಾರಿಯಾದ

ಘಟನೆ ಜೂನ್ 9 ರಂದು ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ನಿರಂತರವಾಗಿ ಎರಡು ದಿನಗಳಲ್ಲಿ ಇದೇ ರೀತಿ ವಂಚಿಸಿ ದ ಘಟನೆ ಬೆಳಕಿಗೆ ಬಂದಿದ್ದು , ಅಂಗಡಿ ಮಾಲಕರು ಭಯಬೀತರಾಗಿದ್ದಾರೆ.
ಘಟನೆಯ ವಿವರ:
ಬಿ. ಸಿ ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಎದುರಿನ ಮಾಣಿಕ್ಯ ಸ್ಟೋರ್ ಗೆ ಜೂನ್ 9 ರಂದು ಆದಿತ್ಯವಾರ ರಾತ್ರಿ ಸುಮಾರು 8-30ಕ್ಕೆ ಬೈಕ್ನಲ್ಲಿ ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ ಅಪರಿಚಿತ ಯುವಕರು, ಒಬ್ಬಾತ ಅಂಗಡಿಗೆ ಬಂದು ದುಬಾರಿ ಬೆಲೆಯ ನಾಲ್ಕು ಪ್ಯಾಕೆಟ್ ಸಿಗರೇಟ್ ಪಡೆದು, ಒಂದು ಸಿಗರೇಟ್ ಸೇದಲು ಕೇಳಿ ಅಂಗಡಿ ಮಾಲಕ ಲೋಕೇಶ್ ಬಿಲ್ಲು 650ರೂ ಆಯಿತೆಂದಾಗ, ಒಂದು ಬಾಟಲ್ ಸ್ಪ್ರೈಟ್ ತೆಗೆದಿಡಿ ಬೈಕ್ನಲ್ಲಿರುವ ಸ್ನೇಹಿತನಲ್ಲಿ ಹಣ ಕೇಳಿ ತರುತ್ತೆನೆಂದು ಹೊರಗಡೆ ರಸ್ತೆ ಬದಿಗೆ ಹೋದವನು, ಅಂಗಡಿ ಮಾಲಕ ಲೋ ಕೇಶ್ ಫ್ರಿಡ್ಜ್ ನಿಂದ ಸ್ಪ್ರೈಟ್ ಬಾಟಲ್ ತೆಗೆಯುವಾಗ ಬೈಕ್ ಸ್ಟಾರ್ಟ್ ಮಾಡಿ 650 ಬೆಲೆಯ ಸಿಗರೇಟ್ ಸಮೇತ ಅತೀ ವೇಗದಲ್ಲಿ ಪರಾರಿಯಾಗಿದ್ದಾರೆ. ಮರುದಿವಸ ಮಣಿಹಳ್ಳ ಶ್ರೀಧರ್ ಎಂಬವರ ಅಂಗಡಿಯಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಅಂಗಡಿಯಲ್ಲಿರುವ ಸಿ. ಸಿ ಕ್ಯಾಮರಾದಲ್ಲಿ ಒಬ್ಬ ಯುವಕನ ಮುಖಚಹರೆ ಸೆರೆಯಾಗಿದೆ. ಈ ವಂಚಕ ಯುವಕರ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ವಿನಂತಿ. ಇಂತಹ ವಂಚಕರು ನಿಮ್ಮ ಊರಿಗೂ ಬರಬಹುದು ಎಚ್ಚರವಹಿಸಿ.

More from the blog

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...