ವಿಟ್ಲ: ಬಾಳೆಕೋಡಿ ಶಿಲಾಂಜನ ಕ್ಷೇತ್ರ ಮೌನಕ್ಕೆ ಜಾರಿದೆ. ಡಾ! ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರು ಜೀವನದ ಯಾತ್ರೆಗೆ ಸೋಮವಾರ ತಡ ರಾತ್ರಿ ಅಂತಿಮ ಚುಕ್ಕಿ ಇಟ್ಟಿದ್ದಾರೆ.

ವಿಟ್ಲದ ಕನ್ಯಾನದ ಗ್ರಾಮದ ಬಾಳೆಕೋಡಿ ಶಿಲಾಂಜನಾ ಕ್ಷೇತ್ರದ ಶ್ರೀ ಡಾ. ಶಶಿಕಾಂತ ಸ್ವಾಮೀಜಿ ಅನಾರೋಗ್ಯದಿಂದ ನಿಧನರಾದರು.
45 ವರ್ಷದ ಬಾಳೆಕೋಡಿ ಸ್ವಾಮೀಜಿ, ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು. ಪ್ರತಿನಿತ್ಯ ಇಲ್ಲಿಗೆ ಕರ್ನಾಟಕ ಹಾಗೂ ಕೇರಳ ರಾಜ್ಯದಿಂದ ಹಲವು ಭಕ್ತರು ತಮ್ಮ ಕಷ್ಟಗಳ ನಿವಾರಣೆಗಾಗಿ ಬರುತ್ತಿದ್ದರು. ಅವರು ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವು ಸಮಯ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಕ್ಷೇತ್ರದ ಸಮೀಪದಲ್ಲಿರುವ ಮನೆಯಲ್ಲಿದ್ದರು. ಅವರಿಗೆ ಡಾಕ್ಟರೇಟ್ ಬಿರುದು ಕೂಡ ಲಭಿಸಿತ್ತು. ತೀರಾ ಅನಾರೋಗ್ಯದಿಂದ ಕ್ಷೇತ್ರದಲ್ಲಿ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.
ಸಣ್ಣ ಪ್ರಾಯದಲ್ಲಿ ಸ್ವಾಮೀಜಿ ನಿಧನರಾಗಿರುವುದು ಕ್ಷೇತ್ರದ ಭಕ್ತರಿಗೆ ನೋವು ತಂದಿದೆ.
ಕ್ಷೇತ್ರದ ಬಗ್ಗೆ ಸಾಕಷ್ಟು ಕನಸು ಹೊಂದಿದ್ದ ಸ್ವಾಮೀಜಿ ಹಲವಾರು ಅಭಿವೃದ್ಧಿ ಕಾರ್ಯಗಳ ಮೂಲಕ ಗ್ರಾಮದ ಅಭಿವೃದ್ಧಿ ಗೂ ಸಹಕಾರಿಯಾಗಿದ್ದರು.
ಇಂತಹ ಓರ್ವ ಸ್ವಾಮೀಜಿ ಯ ನಿಧನದ ವಾರ್ತೆ ಸಮಾಜಕ್ಕೆ ತುಂಬಲಾರದ ನಷ್ಟ ವಾಗಿದೆ.

