Sunday, July 6, 2025

ಮಹಾಮಸ್ತಕಾಭಿಷೇಕಕ್ಕೆ ತೆರಳುವ ಭಕ್ತಾಧಿಗಳಿಗೆ ಬಿ.ಸಿ.ರೋಡಿನಲ್ಲಿ ಸ್ವಾಗತದ್ವಾರ

ಬಂಟ್ವಾಳ: ಫೆ.9 ರಿಂದ 18 ರವರೆಗೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಅಂಗವಾಗಿ ಬಿಸಿರೋಡಿನಿಂದ ಧರ್ಮಸ್ಥಳ ತೆರಳುವ ಭಕ್ತಾಧಿಗಳಿಗೆ ಸ್ವಾಗತಕೋರುವ ಸ್ವಾಗತದ್ವಾರವನ್ನು ಬಿ.ಸಿ.ರೋಡಿನ ಬ್ರಹ್ಮ ಶ್ರೀ ವ್ರತ್ತ ದ ಬಳಿ ಬಂಟ್ವಾಳ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಿರ್ಮಿಸಲಾಗಿದೆ.
ಈ ಸ್ವಾಗತ ದ್ವಾರವನ್ನು ಗುರುವಾರ ಬೆಳಿಗ್ಗೆ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ ಉದ್ಘಾಟಿಸಿದರು.
ಈ‌ಸಂದರ್ಭದಲ್ಲಿ ಬಿಸಿರೋಡಿನ ಜನಜಾಗ್ರತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿ.ಸೋಜ, ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾದವ ವಳವೂರು, ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಸದಾನಂದ ನಾವೂರ, ಕೃಷ್ಟಪ್ಪ ಪೂಜಾರಿ, ಬಂಟ್ವಾಳ ವಲಯ ಅಧ್ಯಕ್ಷ ವಸಂತ ಮೂಲ್ಯ, ಬಿಸಿರೋಡ ವಲಯ ಅಧ್ಯಕ್ಷ ಶೇಖರ್ ಕಾಮಾಜೆ, ಯೋಜನಾಧಿಕಾರಿ ಜಯಾನಂದ ಪಿ.ಪ್ರಮುಖರಾದ ಪದ್ಮನಾಭ ಪರಂಗಿಪೇಟೆ, ಗಂಗಾದರ, ಪಶುಪತಿ, ಸತ್ಯಪ್ರಸಾದ್, ಯತೀಶ್ ವಿಟ್ಲ, ದಾಮೋದರ ನಲ್ಕೆಮಾರ್, ವಾಮನ ಪೂಪಾಡಿಕಟ್ಟೆ, ವಾಮನ ಪಕ್ಜೆರೊಟ್ಟು, ನಿತಿನ್ ನಲ್ಕೆಮಾರ್, ಗೋಪಾಲ, ಕೃಷ್ಣ ಶಾಂತಿ, ಧನುಷ್, ತಿಮ್ಮಪ್ಪ, ನಾರಾಯಣ, ನಾರಾಯಣ ಮೆಲ್ಕಾರ್, ಜನಾರ್ಧನ, ತಿಲಕ್ , ಹಾಗೂ ಮೇಲ್ವಿಚಾರಕರಾದ, ಶಶಿದರ್  , ರಮೇಶ್, ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.

More from the blog

ಮುಂದುವರಿದ ಮಳೆ ಅಬ್ಬರ : ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ..

ಬಂಟ್ವಾಳ : ಶನಿವಾರವೂ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು, ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಇಲ್ಲಿನ ಗ್ರಾಮಪಂಚಾಯತ್ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ತೋಡಿನಲ್ಲಿ...

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...

Puttur : ಯುವತಿಗೆ ವಂಚಿಸಿದ ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಪುತ್ತೂರು: ಯುವತಿಯೊಂದಿಗೆ ಮದುವೆಯಾಗುವುದಾಗಿ ದೈಹಿಕ ಸಂಪರ್ಕ  ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ...

Bhandaribettu : ರಸ್ತೆಗೆ ಉರುಳಿ ಬಿದ್ದ ಬಂಡೆಕಲ್ಲು – ಪುರಸಭೆ, ಕಂದಾಯ ಇಲಾಖೆಯಿಂದ ತೆರವು ಕಾರ್ಯ

ಬಂಟ್ವಾಳ : ಬಿಸಿರೋಡು - ವಿಲ್ಲಾಪುರಂ ರಾಜ್ಯ ಹೆದ್ದಾರಿಗೆ ಬಂಡೆಕಲ್ಲು ಉರುಳಿ ಬಿದ್ದ ಪರಿಣಾಮ, ಕಕ್ಕೆ ಪದವು ನಿವಾಸಿ ರವಿ ಎಂಬವರ ಸ್ಕೂಟರ್ ಹಾನಿಯಾಗಿ, ಅವರು ಗಾಯಗೊಂಡಿದ್ದಾರೆ. ಬಂಟ್ವಾಳ ಪುಂಜಾಲಕಟ್ಟೆ ರಾಷ್ಟೀಯ ಹೆದ್ದಾರಿ ಬಿ.ಸಿ.ರೋಡ್...