ಬಂಟ್ವಾಳ: ವಿಜಯ ಕಾಲೇಜು ಮೂಲ್ಕಿ ಇವರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಯುವ ಪ್ರತಿಭೆಗಳನ್ನು ಗುರುತಿಸಲು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಕಾಲೇಜಿನ ದ್ವಿತೀಯ ಬಿ.ಎ ಯ ಕವಿತಾ ಕೆ. ಇವರ ’ಕನಸು’ ಕವನವು ಪ್ರಥಮ ಸ್ಥಾನವನ್ನೂ..


ದ್ವಿತೀಯ ಬಿ.ಎಸ್ಸಿಯ ಸ್ಪೂರ್ತಿ ಇವರ ’ಕಸದ ಪರಿವೆಯ ಒಳಗೆ’ ಕವನವು ತೃತೀಯ ಸ್ಥಾನವನ್ನು ಪಡೆದಿದೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದದವರು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.