Thursday, January 29, 2026

ಸುಳ್ಳಮಲೆಯ ಐತಿಹಾಸಿಕ ಕೆರೆಗಳ ಪುನರ್ ನಿರ್ಮಾಣ ಕಾರ್ಯಕ್ಕೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್: ಮಾಣಿ ಪಂಚಾಯತ್ ಗೆ ಅರಣ್ಯ ಇಲಾಖೆ ನಿರ್ದೇಶನ

ಬಂಟ್ವಾಳ: ತುಳುನಾಡಿನ ದೈವಾರಾದನೆಯ ಸಂದಿ ಪಾಡ್ದನದಲ್ಲಿ ಉಲ್ಲೇಖವಿರುವ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯ ಸುಳ್ಳಮಲೆ ಬೆಟ್ಟ ಬಂಟ್ವಾಳ ತಾಲೂಕಿನಲ್ಲೇ ಚಿರಪರಿಚಿತ ಜಾಗ. ಇಲ್ಲಿ ಪ್ರಾಚೀನ, ಧಾರ್ಮಿಕ ಹಿನ್ನೆಲೆ ಇರುವ ಏಳು ಕೆರೆಗಳಿದ್ದು ಅವು ಕಾಲಗರ್ಭಗಳಲ್ಲಿ ವೈಭವವನ್ನು ವನ್ನು ಪಡೆದಿದ್ದು ಈಗ ಶಿಥಿಲವಾಗಿದೆ.ಪ್ರಸ್ತುತ ಸುಳ್ಳಮಲೆ ಸರಕಾರದ ಅರಣ್ಯ ಇಲಾಖೆಯ ರಕ್ಷಿತಾರಣ್ಯವಾಗಿದೆ.

ಇದೀಗ ಅರಣ್ಯ ಇಲಾಖೆಯು ಸುಳ್ಳಮಲೆಯ ಚಾರಿತ್ರಿಕ ಹಿನ್ನೆಲೆಯ ಏಳು ಕೆರೆ ಯನ್ನು ಎಂ.ಜಿ.ಎನ್.ಆರ್.ಇ.ಜಿ .ಎಸ್( ಉದ್ಯೋಗ ಖಾತರಿ ಯೋಜನೆ) ಮೂಲಕ ಹೂಳೆತ್ತುವ ಮೂಲಕ ಪುನರ್ನಿರ್ಮಾಣ ಮಾಡಲು ಸ್ತಳೀಯ ಮಾಣಿ ಗ್ರಾಮ ಪಂಚಾಯತ್ ಗೆ ನಿರ್ದೇಶನನದ ಜೊತೆಯಲ್ಲಿ ಶರತ್ತುಬದ್ದ ಅನುಮತಿ ನೀಡಿದೆ.ಇದು ಸ್ತಳೀಯರು ಹಾಗೂ ಗ್ರಾಮಸ್ಥರಲ್ಲಿ ಸಂತಸದ ವಿಚಾರ ಆಗಿರುತ್ತದೆ. ಮಾತ್ರವಲ್ಲದೆ ” ಗುಹಾತೀರ್ಥ ” ಮಾತ್ರ ಅಲ್ಲದೆ ಸ್ತಳೀಯ ಸುತ್ತಮುತ್ತಲಿನ ಹಲವಾರು ಧಾರ್ಮಿಕ ಕ್ಷೇತ್ರ ಗಳ ಜೊತೆಯಲ್ಲಿ ಅವಿನಭಾವ ಸಂಬಂಧ ಹೊಂದಿರುವ ಈ ಸುಳ್ಳಮಲೆಯನ್ನು ಹಳೆಯದಾದ ಧಾರ್ಮಿಕ ಹಿನ್ನೆಲೆಯಲ್ಲಿ ಪುನರ್ನಿರ್ಮಾಣ ಮಾಡಲು ಐತಿಹಾಸಿಕ ಪುರಾತತ್ವ ಇಲಾಖೆ , ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಉತ್ತಮ ಧಾರ್ಮಿಕ ಕೇಂದ್ರ ವಾಗಿ ನಿರ್ಮಿಸಲಿ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಕೇಳಿಬರುತ್ತದೆ.

More from the blog

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...