ಬಂಟ್ವಾಳ: ತಂದೆ ಮಗನ ಗಲಾಟೆ ನೋಡಲಾರದೆ ಮನೆಯೊಡತಿ ಆತ್ಮಹತ್ಯೆ ಮಾಡಿದ ಘಟನೆ ತಣ್ಣೀರು ಪಂತ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ವ್ಯಾಪ್ತಿಯ ತಣ್ಣೀರು ಪಂತ ಗ್ರಾಮದ ಅಳಕೆ ನಿವಾಸಿ ರಾಜೀವ ಪೂಜಾರಿ ಅವರ ಪತ್ನಿ ಚಂದ್ರಾವತಿ (55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ರಾಜೀವ ಪೂಜಾರಿ ಅವರಿಗೆ ನಾಲ್ವರು ಮಕ್ಕಳು, ಅವರಲ್ಲಿ ಕೊನೆಯ ಮಗ ನವೀನ್ ತಂದೆ ತಾಯಿಯ ಜೊತೆ ವಾಸವಾಗಿದ್ದ, ಇತ್ತೀಚಿನ ದಿನಗಳಲ್ಲಿ ತಂದೆ ಮತ್ತು ಮಗನಿಗೆ ನಿತ್ಯ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ನಡೆಯುತ್ತಿದ್ದು, ಇವತ್ತು ಕೂಡಾ ಮಧ್ಯಾಹ್ನ ದ ವೇಳೆ ಗಲಾಟೆ ನಡೆಯಿತು.
ದಿನಾ ಇವರ ಗಲಾಟೆ ನೋಡಿ ನೋಡಿ ಸಹಿಸಲಾಗದ ಚಂದ್ರವಾತಿ ಇವರ ಗಲಾಟೆ ನಡೆಯುತ್ತಿದ್ದಂತೆ ದನ ಕಟ್ಟುವ ಹಗ್ಗವನ್ನು ಹಿಡಿದುಕೊಂಡು ಹೋಗಿ ಅಲ್ಲೇ ಸಮೀಪದ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
