ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಸೇತುವೆ ಹಾಗೂ ರಸ್ತೆ ಅಭಿವೃದ್ಧಿಗೆ ಅರುವರೆ ಕೋಟಿ ಅನುದಾನ!!

ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಇದೆ ಮೊದಲ ಬಾರಿ ಇಷ್ಟು ದೊಡ್ಡ ಮೊತ್ತದ ಅನುದಾನ ತರುವಲ್ಲಿ ಯಶಸ್ವಿಯಾದ ಸುಬ್ರಹ್ಮಣ್ಯ ಕಾಂಗ್ರೆಸ್ ಕಾರ್ಯಕರ್ತರು.
ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಂಜೇಶ್ವರ ರಸ್ತೆ,ಕುಮಾರಧಾರ ಬಳಿ ದರ್ಪಣ ತೀರ್ಥ ನದಿಗೆ ಸೇತುವೆ ನಿರ್ಮಾಣ ಹಾಗೂ ರಸ್ತೆಯನ್ನು ಎತ್ತರಕ್ಕೆ ಏರಿಸಿ ಮುಳುಗಡೆಯಿಂದ ತಪ್ಪಿಸಲು ರಸ್ತೆ ನಿರ್ಮಾಣಕ್ಕೆ 6.5ಕೋಟಿ ಅನುದಾನ ಮಂಜೂರು ಮಾಡಿದ ಕರ್ನಾಟಕ ಸರಕಾರ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿ 100 ರ ಕಿ ಮೀ 0.2 ರ ಕುಮಾರಧಾರದಲ್ಲಿ ಇರುವ ದರ್ಪಣ ತೀರ್ಥ ಮುಳುಗು ಸೇತುವೆಯನ್ನು ಹಾಗೂ ಕುಮಾರಧಾರ ದಿಂದ ಪರ್ವತಮುಖಿ ವರೆಗಿನ ರಸ್ತೆಯನ್ನು ಎತ್ತರಕ್ಕೆ ಏರಿಸಿ ಸರ್ವ ಋತು ಸಂಪರ್ಕ ಸೇತುವೆ ಹಾಗೂ ರಸ್ತೆಯನ್ನಾಗಿ ಮರು ನಿರ್ಮಿಸಲು ಕ್ರಮವಾಗಿ ₹450 ಲಕ್ಷಗಳು ಹಾಗೂ ₹200 ಲಕ್ಷಗಳೊಂದಿಗೆ ಒಟ್ಟು ₹650 ಲಕ್ಷಗಳ ಅನುದಾನ ಮಂಜೂರಾಗಿದ್ದು
ಈ ಕಾಮಗಾರಿಗಳಿಗೆ ದಿನಾಂಕ 10.03.2024ನೇ ರವಿವಾರ ಕಡಬ ಸೈಂಟ್ ಜೋಕಿಮ್ಸ್ ಶಾಲೆಯಲ್ಲಿ ನಡೆಯುವ ಕರ್ನಾಟಕ ಸರಕಾರದ ಗ್ಯಾರಂಟಿ ಸಮಾವೇಶದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ ಗುಂಡೂರಾವ್,ವಿಧಾನ ಪರಿಷತ್ತಿನ ಸದಸ್ಯ ಹರೀಶ್ ಕುಮಾರ್,ಮಂಜುನಾಥ ಭಂಡಾರಿ, ಶಕುಂತಲ ಶೆಟ್ಟಿ, ಮಮತಾ ಗಟ್ಟಿ, ಡಿ.ಸಿ.,ಎ.ಸಿ .,ರಮಾನಾಥ ರೈ, ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.
ಈ ಭಾಗದಲ್ಲಿ ಮಳೆಗಾಲದಲ್ಲಿ ಪ್ರತಿ ವರ್ಷವೂ ಕುಮಾರಧಾರ ನದಿ ತುಂಬಿ ಹರಿಯುವ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆ ಮುಳುಗಡೆ ಆಗುತ್ತಿತ್ತು, ಕಳೆದ ವರ್ಷ ಕಾಲೇಜು ವಿದ್ಯಾರ್ಥಿಗಳು ನದಿ ನೀರನ್ನು ದಾಟಿ ಪರೀಕ್ಷೆ ಬರೆದ ಘಟನೆ ನಡೆದಿದ್ದು ಬಾರಿ ಸುದ್ದಿಯಾಗಿತ್ತು,
ಸಾರ್ವಜನಿಕರು, ಶಾಲಾ,ಕಾಲೇಜು ಮಕ್ಕಳು, ಈ ರಸ್ತೆಯಲ್ಲಿ ಸಂಚಾರಿಸುವವರು ತೀರಾ ಸಮಸ್ಯೆ ಪಡುತ್ತಿದ್ದರು,ಸೇತುವೆ ನಿರ್ಮಾಣ ಆಗಬೇಕು ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು ಎಂದು ಅದೆಷ್ಟೋ ಬಾರಿ ಮಾಧ್ಯಮದ ಮೂಲಕ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ ಅವರು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಸದ್ಯ ಕರ್ನಾಟಕ ಸರಕಾರಕ್ಕೆ ಮನವಿ ಸಲ್ಲಿಸಿ ಅರುವರೆ ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸುಬ್ರಹ್ಮಣ್ಯ ಕಾಂಗ್ರೆಸ್ ಪಕ್ಷದ ಸದಸ್ಯರಾದ ಸುಬ್ರಹ್ಮಣ್ಯ ಗ್ರಾ. ಪಂ, ಸದಸ್ಯ ಹರೀಶ ಇಂಜಾಡಿ ,ಮಾಜೀ ಗ್ರಾ. ಪ ಸದಸ್ಯ ಮೋಹದಾಸ್ ರೈ, ಶಿವರಾಮ್ ರೈ, ಎಲ್ಲಾ ಸದಸ್ಯರ ಪ್ರಯತ್ನದ ಪಲವಾಗಿ ಅತೀ ಶೀಘ್ರದಲ್ಲಿ ದರ್ಪಣ ತೀರ್ಥ ನದಿಗೆ ಹಾಗೂ ಪರ್ವತ ಮುಖಿ ವರೆಗೆ ರಸ್ತೆ ನಿರ್ಮಾಣವಾಗಲಿದೆ.
ಮುಂದಿನ ದಿನಗಳಲ್ಲಿ ಸರ್ವ ಋತುವಿನಲ್ಲೂ ಯಾವುದೇ ಅಡೆತಡೆಗಳಿಲ್ಲದೆ ಸುಬ್ರಹ್ಮಣ್ಯ ದಿಂದ ಪಂಜ,ಪುತ್ತೂರು,ಮಂಜೇಶ್ವರ ಕಡೆಗಳಿಗೆ ಸಂಚರಿಸ ಬಹುದು ಎಂದು ಮಾಧ್ಯಮಕ್ಕೆ ಸುಬ್ರಹ್ಮಣ್ಯ ಗ್ರಾ. ಪಂ. ಸದಸ್ಯರಾದ ಹರೀಶ ಇಂಜಾಡಿ ಅವರು ಮಾಹಿತಿ ನೀಡಿದರು.