ಸುಬ್ರಹ್ಮಣ್ಯ: ಸರಕಾರ ಮತ್ತು ಧಾರ್ಮಿಕ ದತ್ತಿ ಇಲಾಖಾ ಆಯುಕ್ತರ ಆದೇಶದಂತೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ದೀಪಾವಳಿಯ ಬಲಿಪಾಡ್ಯಮಿಯ ದಿನವಾದ ಅ.26ರಂದು ಬುಧವಾರ ಸಂಜೆ 5.30 ಯಿಂದ 6.30 ತನಕ ಗೋದೂಳಿ ಲಗ್ನದಲ್ಲಿ ಗೋಪೂಜೆ ನೆರವೇರಲಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.


ಬಲಿಪಾಡ್ಯಮಿಯ ದಿನದಂದು ಗೋವುಗಳಿಗೆ ಸ್ನಾನ ಮಾಡಿಸಿ ಅರಿಶಿನ , ಕುಂಕುಮ , ಹೂವುಗಳಿಂದ ಅಲಂಕರಿಸಿ, ಅಕ್ಕಿ , ಬೆಲ್ಲ , ಸಿಹಿ ತಿನಿಸುಗಳನ್ನು ಒಳಗೊಂಡ ಗೋಗ್ರಾಸ ನೀಡಿ ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ಪುರೋಹಿತರು ಪೂಜಾದಿಗಳನ್ನು ನೆರವೇರಿಸಲಿದ್ದಾರೆ.












