Sunday, February 9, 2025

ವಿಫಾ ಕಪ್ ಟ್ವೆಕಾಂಡೋ ಚಾಂಪಿಯನ್ ಶಿಪ್ : ಬಂಟ್ವಾಳ ವಿದ್ಯಾರ್ಥಿಗಳಿಗೆ 20 ಚಿನ್ನ, 6 ಬೆಳ್ಳಿ ಪದಕ

ಬಂಟ್ವಾಳ: ಬೆಂಗಳೂರಿನ ರಜಾಜಿ ನಗರದಲ್ಲಿ ನಡೆದ 3ನೇ ವರ್ಷದ ವೀಫಾ ಕಪ್ ಸೌತ್ ಝೋನ್ ಟೇಕ್ವಾಂಡೋ ಚ್ಯಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಆಂಡ್ ಮಾರ್ಶಲ್ ಆರ್ಟ್ ಸೆಂಟರಿನ ವಿದ್ಯಾರ್ಥಿಗಳು ಫೈಟಿಂಗ್ ಮತ್ತು ಪೂಂಸೆ ವಿಭಾಗದಲ್ಲಿ 20 ಚಿನ್ನ ಹಾಗೂ 6 ಬೆಳ್ಳಿ ಪದಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸಬ್ ಜೂನಿಯರ್ ವಿಭಾಗದ 44 ಕೆಜಿ ವಿಭಾಗದ ಫೈಟಿಂಗ್ ಹಾಗೂ ಪೂಂಸೆಯಲ್ಲಿ ಮುಹಮ್ಮದ್ ಆಯಾನ್ 2 ಚಿನ್ನ, 18 ಕೆಜಿ ವಿಭಾಗದಲ್ಲಿ ಮುಹಮ್ಮದ್ ಶಯಾನ್ ಒಂದು ಚಿನ್ನ ಹಾಗೂ ಒಂದು ಬೆಳ್ಳಿ, 32 ಕೆಜಿ ವಿಭಾಗದಲ್ಲಿ ಕೆ ಮುಹಮ್ಮದ್ ಶಾಮಿಲ್ ಎರಡು ಚಿನ್ನ, 34 ಕೆಜಿ ವಿಭಾಗದಲ್ಲಿ ಮುಹಮ್ಮದ್ ಫಾಝಿಲ್ ಎರಡು ಚಿನ್ನ, 24 ಕೆಜಿ ವಿಭಾಗದಲ್ಲಿ ಮುಹಮ್ಮದ್ ಆತೀಫ್ ಎರಡು ಚಿನ್ನ, 30 ಕೆಜಿ ವಿಭಾಗದಲ್ಲಿ ಮುಹಮ್ಮದ್ ಜಾಝಿಲ್ ಎರಡು ಚಿನ್ನ, 26 ಕೆಜಿ ವಿಭಾಗದಲ್ಲಿ ಮುಹಮ್ಮದ್ ನಶಾಲ್ ಎರಡು ಚಿನ್ನದ ಪದಕ ಪಡೆದರೆ, ಜ್ಯೂನಿಯರ್ ವಿಭಾಗದ 51 ಕೆಜಿ ವಿಭಾಗದಲ್ಲಿ ನೌಶಿಕ್ ರಾಜ್ ಫೈಟಿಂಗ್ ಹಾಗೂ ಪೂಂಸೆಯಲ್ಲಿ ಎರಡು ಚಿನ್ನ, 68 ಕೆಜಿ ವಿಭಾಗದಲ್ಲಿ ಮುಹಮ್ಮದ್ ಸುಹೈಲ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ, 40 ಕೆಜಿ ವಿಭಾಗದಲ್ಲಿ ಮುಹಮ್ಮದ್ ಶಫೀಕ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ, 62 ಕೆಜಿ ವಿಭಾಗದಲ್ಲಿ ಪೂಂಸೆಯಲ್ಲಿ ಚಿನ್ನ ಹಾಗೂ ಫೈಟಿಂಗಿನಲ್ಲಿ ಬೆಳ್ಳಿ, 45 ಕೆಜಿ ವಿಭಾಗದಲ್ಲಿ ಯೂಸುಫ್ ಹಫೀಝ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ, 58 ಕೆಜಿ ವಿಭಾಗದಲ್ಲಿ ಮುಹಮ್ಮದ್ ತಮೀಝ್ ಫೈಟಿಂಗಿನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುತ್ತಾರೆ. ಇವರಿಗೆ ಇಸಾಕ್ ನಂದಾವರ ತೆರಬೇತಿ ನೀಡಿರುತ್ತಾರೆ.

More from the blog

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...