ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ಅ ಸೋಸಿಯೇಷನ್ ದ.ಕ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ಶಿಕ್ಷಕ ಪರಮೇಶ್ವರ್ ನಾಯ್ಕ್ ಉಜಿರೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ, ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ, ಕೋಶಾಧಿಕಾರಿ ಪ್ರಭಾಕರ ಧರ್ಮಸ್ಥಳ, ಉಪಾಧ್ಯಕ್ಷ ಗಣೇಶ್ ವೇಣೂರು, ವಲಯದ ನೂತನ ಅಧ್ಯಕ್ಷ ಅಶೋಕ್ ಆಚಾರ್ಯ ನಾವೂರ, ಕಾರ್ಯಧರ್ಶಿ ಹರ್ಷ ಬಳ್ಳಮಂಜ, ಕೋಶಾಧಿಕಾರಿ ಹರೀಶ್ ಕೊಳ್ತಿಗೆ, ಉಪಾಧ್ಯಕ್ಷ ಪ್ರವೀಣ್ ಕೆದ್ದು, ಮಾಜಿ ಅಧ್ಯಕ್ಷ ಉಮೇಶ್ ಟಿ ಬಿ ಕ್ರಾಸ್ ಉಜಿರೆ, ಕೆ ವಸಂತ್ ಶರ್ಮ ಉಜಿರೆ, ನಂದ ಕುಮಾರ್ ಉಜಿರೆ, ಸದಸ್ಯರಾದ ಹರೀಶ್ ಉಜಿರೆ, ಗೋಪಾಲ್ ಟಿ ಬಿ ಕ್ರಾಸ್ ಉಜಿರೆ, ಚಂದ್ರಹಾಸ್ ಚಾರ್ಮಾಡಿ, ಪುರುಷೋತ್ತಮ ಗೇರುಕಟ್ಟೆ, ರಾಮಕೃಷ್ಣ ರೈ ಉಜಿರೆ, ನಾರಾಯಣ ಉಜಿರೆ, ಚಂದ್ರಶೇಖರ್ ಸೊಮಂದಡ್ಕ, ಶಿವಪ್ಪ ನಾಯ್ಕ್ ಉಜಿರೆ, ಮಾಧ್ಯಮ ಪ್ರತಿನಿಧಿ ಮನು ಮದ್ದಡ್ಕ, ಹಾಗೂ ಸನ್ಮಾನಿತರ ಪತ್ನಿ ಮಕ್ಕಳು ಕುಟುಂಬಸ್ತರು ಉಪಸ್ಥಿತರಿದ್ದರು. ಕೆ ವಸಂತ್ ಶರ್ಮ ಸ್ವಾಗತಿಸಿ ನಂದ ಕುಮಾರ್ ಪ್ರಾಸ್ತಾವಿಕ ಮಾತಿನೊಂದಿಗೆ ಪರಿಚಯಿಸಿ ಸದಸ್ಯ ಚಂದ್ರಹಾಸ್ ಚಾರ್ಮಾಡಿ ಸನ್ಮಾನ ಪತ್ರ ಓದಿದರು.

