Wednesday, July 9, 2025

SKSSF ದೂಮಲಿಕೆ ಶಾಖೆ ವತಿಯಿಂದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ 200 ಕುಟುಂಬಗಳಿಗೆ ತಲಾ 5kg ಯಂತೆ 1000 kg ಅಕ್ಕಿ ಹಾಗೂ ತರಕಾರಿ ಕೀಟ್ ವಿತರಣೆ

ಬಂಟ್ವಾಳ: ಲಾಕ್‌ಡೌನ್‌ನಿಂದ  ಜನ ದುಡಿಯಲಾಗದ ಪರಿಸ್ಥಿತಿ, ಸಂಪಾದನೆ ಇಲ್ಲದೆ ಜೀವನ ನಿರ್ವಹಣೆ ಬಗ್ಗೆ ಚಿಂತಿಸುವ ಸಂದಿಗ್ಧ ಪರಿಸ್ಥಿತಿಯನ್ನು ಮನಗಂಡ SKSSF ದೂಮಲಿಕೆ ಶಾಖೆ ತನ್ನ ಶಾಖಾ ವ್ಯಾಪ್ತಿಯ 200 ಕುಟುಂಬಗಳಿಗೆ ತಲಾ 5kg ಯಂತೆ 1000 kg ಅಕ್ಕಿ ಹಾಗೂ ತರಕಾರಿ ಕೀಟ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು *A.M. ಆದಂ ಮುಸ್ಲಿಯಾರ್ ಖತೀಬರು ದೂಮಲಿಕೆ   ದುಆದೊಂದಿಗೆ ಉದ್ಘಾಟಿಸಿದರು*

*ಈ ಕಾರ್ಯಕ್ರಮದಲ್ಲಿ ದೂಮಲಿಕೆ ಜಮಾಹತ್ ಅಧ್ಯಕ್ಷರು SKSSF ದ.ಕ.ಜಿಲ್ಲಾ ಸಮಿತಿ ಕೋಶಾಧಿಕಾರಿ H.E. ಹನೀಫ್ ದೂಮಲಿಕೆ, ಶಾಖಾ ಅಧ್ಯಕ್ಷರಾದ ಅಬುಸಾಲಿ N.C.ರೋಡ್,SKSSF ಮಡಂತ್ಯಾರ್ ಕ್ಲಸ್ಚರ್ ಅಧ್ಯಕ್ಷರಾದ ಹಾಶೀಂ ಪೈಝೀ ಪಾಂಡವರಕಲ್ಲು,ವಿಖಾಯ ರಕ್ತದಾನಿ ಬಳಗ ಬೆಳ್ತಂಗಡಿ ವಲಯ ಉಸ್ತುವಾರಿ ಅಬುಬಕ್ಕರ್ ಬಂಗೇರಕಟ್ಟೆ, ಶಾಖಾ ಕಾರ್ಯದರ್ಶಿ ಇಕ್ಬಾಲ್ ದೂಮಲಿಕೆ, ನೆಲ್ಲಿಗುಡ್ಡೆ ಜಮಾಹತ್ ಅಧ್ಯಕ್ಷರಾದ ರಝಕ್ ನೆಲ್ಲಿಗುಡ್ಡೆ ,ಜಿಲ್ಲಾ ಕೌನ್ಸಿಲರ್ ಶೆರೀಫ್ ದೂಮಲಿಕೆ ,ವಲಯ ಕೌನ್ಸಿಲರ್ ಹಂಝ ಬೇಂಗತ್ತೋಡಿ, ಮುಹಲಿಂರಾದ ರಝಕ್ ಮುಸ್ಲಿಯಾರ್ ದೂಮಲಿಕೆ,ಹಾಗೂ SKSSF ದೂಮಲಿಕೆ ವಿಖಾಯ ತಂಡದ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು*

ಈ ಪುಣ್ಯ ಕಾರ್ಯಕ್ಕೆ ಸಹಾಕರಿಸಿದ ಸರ್ವರಿಗೂ ಆಲ್ಲಾಹನೂ ಇಹಪರದಲ್ಲೂ ವಿಜಯಗೊಳಿಸಲಿ ಆಮೀನ್….

More from the blog

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...