ಬಂಟ್ವಾಳ: ಬಂಟ್ವಾಳ ತಾಲೂಕಿನ ಏಕೈಕ ಆಲಡೆ ಎಂದು ಪ್ರಸಿದ್ಧಿ ಹೊಂದಿದ ಮೂಡುಪಡುಕೋಡಿ ಗ್ರಾಮದ ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಸೋಮವಾರ ನಡೆಯಿತು.
ಜ. 20ರಂದು ವೇ.ಮೂ. ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ದೇವಸ್ಥಾನದ ಪ್ರ. ಅರ್ಚಕ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ಬೆಳಗ್ಗೆ ತೋರಣ ಮುಹೂರ್ತ, ಗೋಪೂಜೆ, ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಸಂಜೆ ಉಪ್ಪಿರ ಜೈ ಭಾರತ್ ಮಾತಾ ಭಜನ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಿತು.
ಸೋಮವಾರ ಬೆಳಗ್ಗೆ ಕಜೆ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಪ್ರಾರ್ಥನೆ, ವೈದಿಕ ಕಾರ್ಯಕ್ರಮ, ಆಶ್ಲೇಷ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ ಮತ್ತು ಪದಾಧಿಕಾರಿಗಳಾದ ಶಂಕರ ಶೆಟ್ಟಿ ಬೆದ್ರ್ಮಾರು, ಸತೀಶ್ ಸಪಲ್ಯ ಮುಂಡಬಲು, ಡಿ.ಎಸ್. ಬೋಳೂರು, ಲೋಕನಾಥ ಶೆಟ್ಟಿ, ಡಾ| ರಾಮಕೃಷ್ಣ ಎಸ್. ಸನಂಗುಳಿ, ಕೆ. ಬೂಬ ಪೂಜಾರಿ, ಗಣೇಶ್ ಶೆಟ್ಟಿ, ಮಂಜುನಾಥ ಪೂಜಾರಿ ಮುಂಡಬಲು, ಸುಧೀರ್ ಶೆಟ್ಟಿ ಎರ್ಮೆನಾಡು, ದಯಾನಂದ ನಾಯ್ಕ, ಹರೀಶ್ ಶೆಟ್ಟಿ, ಮುರಳೀಧರ ಕೆದಿಲಾಯ, ಗಿರಿಜಾ ಶಂಕರ್ ಭಟ್ ಬಡಕೈಕೊಂಬು, ಕೊರಗ ಶೆಟ್ಟಿ ನರ್ವಲ್ದಡ್ಡ, ಬೂಬ ಸಪಲ್ಯ ಮುಂಡಬಲು, ವಸಂತ ಶೆಟ್ಟಿ ಕೇದಗೆ, ಡಾ| ಶಿವಪ್ರಸಾದ್ ಭಟ್ ಸನಂಗುಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

