ಸಿದ್ಧಕಟ್ಟೆ: ಇಲ್ಲಿನ ಸೈಂಟ್ ಪ್ಯಾಟ್ರಿಕ್ ಚರ್ಚ್ ಸಭಾಭವನದಲ್ಲಿ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇದರ ಚಾರ್ಟರ್ ಪ್ರೆಸೆಂಟೇಷನ್ – ಹಕ್ಕು ಪತ್ರ ವಿತರಣಾ ಸಮಾರಂಭ ನಡೆಯಿತು.

ಸೈಂಟ್ ಪ್ಯಾಟ್ರಿಕ್ ಚರ್ಚಿನ ಧರ್ಮಗುರು ಫಾದರ್ ಡೇನಿಯಲ್ ಡಿಸೋಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಜಿಲ್ಲೆ 3181ನ ಗವರ್ನರ್ ರೊ.ಮೇಜರ್ ಡೋನರ್ ಎಂ.ರAಗನಾಥ ಭಟ್ ಚಾರ್ಟರ್ ವಿತರಿಸಿದರು.
ಡಿ.ಜಿ.ಇ ರವೀಂದ್ರ ಭಟ್, ಡಿ.ಜಿ.ಎನ್. ಪ್ರಕಾಶ್ ಕಾರಂತ್, ಎ.ಜಿ ಗಳಾದ ಯತಿ ಕುಮಾರಸ್ವಾಮಿ ಗೌಡ, ಸುರೇಂದ್ರ ಕಿಣಿ, ವಿ.ಎಸ್.ದತ್ತ, ಜವರೇಗೌಡ, ವಿವಿಧ ರೋಟರಿ ಕ್ಲಬ್ಬಿನ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸಂಗಬೆಟ್ಟು ಅಧ್ಯಕ್ಷರಾದ ಸತೀಶ್ ಪೂಜಾರಿ ಅಳಕೆ, ವಿಶೇಷ ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಚುನಾಯಿತರಾದ ರೋಟೇರಿಯನ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ವಿಶೇಷ ಸೇವಾ ಕಾರ್ಯವಾಗಿ ಗ್ರಾಮ ಪಂಚಾಯತ್ ಸಂಗಬೆಟ್ಟಿಗೆ ಆಸನದ ವ್ಯವಸ್ಥೆ ಮತ್ತು ಧ್ವನಿವರ್ಧಕದ ವ್ಯವಸ್ಥೆ ಮಾಡಲಾಯಿತು. ಗುಂಡೂರಿ ಸೇವಾಶ್ರಮಕ್ಕೆ ಶೀಟ್ ಅಳವಡಿಕೆ ಮತ್ತು ಒಂದು ದಿನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಿದ್ಧಕಟ್ಟೆಯ ಹೆಸರನ್ನು ಬೆಳಗಿದ ಕುಮಾರಿ ರಮ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಸಿದ್ಧಕಟ್ಟೆ ಕ್ಲಬ್ಬಿನ ಸ್ಥಾಪನೆಗೆ ಕಾರಣರಾದ ಮೂಡಬಿದ್ರೆ ರೋಟರಿ ಅಧ್ಯಕ್ಷರಾದ ಡಾಕ್ಟರ್ ಸುದೀಪ್, ಜಿ.ಎಸ್.ಆರ್ ಜೆರಾಲ್ಡ್ ಡಿಕೋಸ್ತ, ಕಾರ್ಯದರ್ಶಿಗಳಾದ ಅರವಿಂದ ಕಿಣಿ ಇವರನ್ನು ಸನ್ಮಾನಿಸಲಾಯಿತು. ಸಿದ್ಧಕಟ್ಟೆ ರೋಟರಿ ಸಮುದಾಯ ದಳದ ಅಧ್ಯಕ್ಷರಾಗಿದ್ದ ಮಧ್ವರಾಜ್ ಜೈನ್ ಮತ್ತು ಕಾರ್ಯದರ್ಶಿಗಳಾಗಿದ್ದ ಭರತ್ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಸಿದ್ಧಕಟ್ಟೆ ರೋಟರಿ ಅಧ್ಯಕ್ಷ ಮೈಕಲ್ ಡಿಕೋಸ್ತ ಮತ್ತು ಜ್ಯೋತಿ ದಂಪತಿಯ ಮದುವೆ ವಾರ್ಷಿಕೋತ್ಸವ ಆಚರಿಸಲಾಯಿತು. ಮೂಡುಬಿದರೆ ರೋಟರಿ ಅಧ್ಯಕ್ಷ ರೊ. ಡಾ.ಸುದೀಪ್ ಸ್ವಾಗತಿಸಿ, ಸಿದ್ಧಕಟ್ಟೆ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರೊ. ರಾಜೇಶ್ ನೆಲ್ಯಾಡಿ ವಂದಿಸಿದರು. ರೊ. ದಿನೇಶ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.
