ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿರುವ ಪ್ರಾಚೀನ ಬಸದಿಯನ್ನು ಧರ್ಮಸ್ಥಳದ ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್ ನೇತೃತ್ವದಲ್ಲಿ ಊರಿನ ಶ್ರಾವಕರ ಸಕ್ರಿಯ ಸಹಕಾರದೊಂದಿಗೆ 28 ಲಕ್ಷರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು ಮಾರ್ಚ್ 8 ರಿಂದ 12ರ ವರೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪಂಚಕಲ್ಯಾಣ ಮಹೋತ್ಸವ ನಡೆಯಲಿದೆ.
ಬಸದಿಗೆ ಹೋಗುವ ಮಾರ್ಗ: ಧರ್ಮಸ್ಥಳದಿಂದ ಕಾಯರ್ತಡ್ಕ ಶಿಬರಾಜೆ ಮೂಲಕ ಬಸದಿಗೆ ಹೋಗಬಹುದು ಅಥವಾ ಧರ್ಮಸ್ಥಳದಿಂದ ಅರಸಿನಮಕ್ಕಿ ಮೂಲಕವೂ ಹೋಗಬಹುದು. (ದೂರ: 30 ಕೀ.ಮೀ)
ಉಪಿನಂಗಡಿಯಿಂದ ಪೆರಿಯಶಾಂತಿ, ಕೊಕ್ಕಡ ಅರಸಿನಮಕ್ಕಿ ಮೂಲಕ ಬಸದಿಗೆ ಹೋಗಬಹುದು.


