Wednesday, February 12, 2025

ಗ್ರಾಮಸ್ಥರ ಹೋರಾಟಕ್ಕೆ ಮಣಿದು ಬಾಕಿಯಿರಿಸಿದ್ದ ಹಣವನ್ನು ದೇವಸ್ಥಾನಕ್ಕೆ ನೀಡಿದ ಶಂಭೂರು ಎ.ಎಂ.ಆರ್.ಡ್ಯಾಂ ಸಂಸ್ಥೆ….. ಹೋರಾಟದ ಮುಂದಾಳತ್ವ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಇರಂತಬೆಟ್ಟು ಅವರಿಗೆ ಗ್ರಾಮಸ್ಥರ ಅಭಿನಂದನೆಯ ಮಹಾಪೂರ….

ಬಂಟ್ವಾಳ: ದೇವಸ್ಥಾನಕ್ಕೆ ನೀಡಬೇಕಾಗಿದ್ದ ಹಣವನ್ನು ಬಾಕಿಯಿರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಡೆಸಿದ ಹೋರಾಟಕ್ಕೆ ಮಣಿದು ಹಣ ನೀಡಿದ ಎ.ಎಂ.ಆರ್.ಸಂಸ್ಥೆ.ಗ್ರಾಮಸ್ಥರ ಪರವಾಗಿ ನಿಂತು ದೇವಸ್ಥಾನಕ್ಕೆ ಸಂದಾಯವಾಗಬೇಕಿದ್ದ ಹಣ ಸಿಗುವಂತೆ ಮಾಡಲು ನೇತ್ರತ್ವ ವಹಿಸಿದ ಗ್ರಾಮಪಂಚಾಯತ್ ಅದ್ಯಕ್ಷ ಸಂತೋಷ್ ಕುಮಾರ್ ಇರಂತಬೆಟ್ಟು ಅವರಿಗೆ ಅಭಿನಂದನೆ ಸಲ್ಲಿಸಿದ ಘಟನೆ ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ

ಸುಮಾರು 3 ವರ್ಷಗಳಿಂದ ಶಂಭೂರು A.M.R. DAM ನವರಿಂದ ವರ್ಷಕ್ಕೆ ರೂ. 50,000/- ದಂತೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವಕ್ಕೆ ನೀಡಬೇಕಾದ ಸುಮಾರು ರೂ. 1,50,000/- ವನ್ನು ನೀಡದೆ ಬಾಕಿಯಿರಿಸಿದ್ದು. ಇದನ್ನು ದೇವಸ್ಥಾನದ ಪರವಾಗಿ ದೇವಸ್ಥಾನದ ಭಕ್ತರು ಹಲವು ಬಾರಿ ಸಂಸ್ಥೆಯ ವ್ಯವಸ್ಥಾಪಕರಲ್ಲಿ ನೀಡುವಂತೆ ಮನವಿ ಮಾಡಿದರೂ ಅದಕ್ಕೆ ಯಾವುದೇ ರೀತಿಯಾದ ಸ್ಪಂದನೆ ದೊರೆಯದ ಕಾರಣ ದೇವಸ್ಥಾನದ ಭಕ್ತರೆಲ್ಲರೂ ಒಟ್ಟು ಸೇರಿ ಫೆ. 19ರ ಸೋಮವಾರದಂದು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ರಸ್ತೆಯನ್ನು ಬಂದ್ ಮಾಡಿ ಡ್ಯಾಮ್‌ ಗೆ ಹೋಗುವ ವಾಹನ ಹಾಗೂ ಸಿಬ್ಬಂದಿಗಳನ್ನು ತಡೆದು ದೇವಸ್ಥಾನಕ್ಕೆ ನೀಡಲು ಬಾಕಿಯಿರುವ ರೂ. 1,50,000/- ವನ್ನು ತಕ್ಷಣವೇ ನೀಡುವಂತೆ ಆಗ್ರಹಿಸಲಾಗಿತ್ತು.ಜೊತೆಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ದೇವಸ್ಥಾನದ ರಸ್ತೆಯ ರಿಪೇರಿ ಕಾರ್ಯ ಮಾಡಬೇಕು ಎಂದು ಒತ್ತಾಯ ಮಾಡಲಾಗಿತ್ತು. ಈ ಹೋರಾಟಕ್ಕೆ ಮನಿದ ಸಂಸ್ಥೆಯು ದೇವಸ್ಥಾನಕ್ಕೆ ಸಂದಾಯ ಮಾಡಲು ಬಾಕಿಯಿದ್ದ ರೂ. 1,50,000/- ದ ಜೊತೆಗೆ ಹೆಚ್ಚುವರಿಯಾಗಿ ರೂ. 14,000/- ವನ್ನು ನೀಡಿದ್ದಾರೆ. ಒಟ್ಟು 1,64,000/- ವನ್ನು ಪ್ರತಿಭಟನೆ ನಡೆಸಿದ ಮರುದಿನವೇ ಅಂದರೆ ಕೇವಲ ಒಂದೇ ದಿನದಲ್ಲಿ ದೇವಸ್ಥಾನಕ್ಕೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಬಗ್ಗೆ ಮುತುವರ್ಜಿಯಿಂದ ಕೆಲಸ ಮಾಡಿ ದೇವಸ್ಥಾನಕ್ಕೆ ಹಣ ಸಿಗುವಂತೆ ‌ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ಸಾರೆ.

ಇದರ ಜೊತೆಗೆ ರಸ್ತೆ ರಿಪೇರಿ ಮಾಡಿ ಕೊಡುವಂತೆ ನರಿಕೊಂಬು ಗ್ರಾಮಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಒಂದು ನಿರ್ಣಯ ಮಾಡಲಾಗಿದ್ದು, ಸಂಸ್ಥೆಯ ಎಂ.ಡಿ.ಗೆ ಪತ್ರ ಬರೆಯಲಾಗಿದೆ ಎಂದು ಗ್ರಾ.ಪಂ.ಅಧ್ಯಕ್ಷರು‌ ತಿಳಿಸಿದ್ದಾರೆ .

ರಸ್ತೆಯ ರಿಪೇರಿಯನ್ನು ಕೂಡ ಶೀಘ್ರವಾಗಿ ‌ಕಂಪೆನಿಯ ಮುಖಾಂತರ ವೇ ಮಾಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಂಪೆನಿಯ ಘನಗಾತ್ರದ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡಿದ ಪರಿಣಾಮವೇ ರಸ್ತೆ ಹಾಳಾಗಿದ್ದು,ಕಂಪನಿ ಕಣ್ಣು ಮುಚ್ಚಿ ಕುಳಿತರೆ ಮತ್ತೆ ಉಗ್ರ ಹೋರಾಟದ ಹಾದಿ ಹಿಡಿಯುತ್ತೇವೆ ಎಂಬ ಎಚ್ಚರಿಕೆ ಯನ್ನು ನೀಡಿದ್ದಾರೆ.

More from the blog

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...