Tuesday, July 1, 2025

ಆತ್ಮಸಾಕ್ಷಿಯ ಪ್ರಾಮಾಣಿಕ ಸೇವೆಯೇ ಶ್ರೆಷ್ಟ ಸೇವೆ: ಪ್ರಭಾಕರ ಪ್ರಭು

ಬಂಟ್ವಾಳ: ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೆ, ತನ್ನ ತೃಪ್ತಿಗೆ ಸರಿಯಾಗಿ ಆತ್ಮಸಾಕ್ಷಿಯ ಪ್ರಾಮಾಣಿಕವಾಗಿ ಸಲ್ಲಿಸಿದ ಸೇವೆಯೆ ಶ್ರೆಷ್ಟ ಸೇವೆ ಇಂತಹ ಸಮಾಜ ಮುಖಿ ಕೆಲಸವು ಸಮಾಜದಿಂದ ಗೌರವಿಸಲ್ಪಡುವಾಗ ಜೀವನ ಸಾರ್ಥಕ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ.
ಅವರು ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತೀಯ ಕರ್ಪೆ ಅಂಚೆ ಕಚೇರಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ಇದೀಗ ನಿವ್ರತ್ತಿ ಹೊಂದಿದ ಜೀನಶ್ರೀ ಎಂಬವರಿಗೆ ಕರ್ಪೆ ಸಮಾಜ ಮಂದೀರದಲ್ಲಿ ನಡೆದ ಗೌರವ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಮುಖ್ಯ ಅಥಿತಿಯಾಗಿದ್ದ ನಿವೃತ್ತ ಶಾಲಾ ಪರಿವೀಕ್ಷಣಾ ಅಧಿಕಾರಿ ನಾರಾಯಣ ನಾಯಕ್ ಮಾತಾಡಿ ಸರಕಾರಿ ನೌಕರರು ನಿವೃತ್ತಿ ನಂತರವೂ ಸಮಾಜ ಸೇವೆ ಯಾತ್ತ ಮುಖ ಮಾಡುವುದರಿಂದ ಆರೊಗ್ಯ ಸೇರಿ ದಂತೆ ಮನಸ್ಸಿಗೆ ನೆಮ್ಮದ್ದಿ ಸಿಗಲು ಸಾದ್ಯ ಎಂದರು.
ಅಂಗನವಾಡಿ ಇಲಾಖೆ ಯ ಮೆಲ್ವೀಚಾರಕಿ ನೀತಾ ಮಾತಾಡಿ ದೇವರ ಗುಣದಂತೆ ಇರುವ ಪುಟಾಣಿ ಮಕ್ಕಳ ಸೇವೆ ಮಾಡುವ ಭಾಗ್ಯ ಮಹತ್ವದ ಕಾರ್ಯ ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ದೇವಪ್ಪ ಕರ್ಕೆರ, ಬಿ. ಶೇಖರ ನಾಯ್ಕ, ಸುಭಾಕ್ಸಿಣಿ., ಪಂಜಿಕಲ್ಲು ಆರೊಗ್ಯ ಸಹಾಯಕಿ ಗೀತಾ, ಸಿದ್ದಕಟ್ಟೆ ರೋಟರಿ ಸಮುದಾಯ ದಳದ ಅದ್ಯಕ್ಷ ಮದ್ವರಾಜ್ ಜೈನ್ ,ಶುಭ ಹಾರೈಸಿದರು.
ಅಭಿನಂದನೆ ಸ್ವೀಕರಿಸಿದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜೀನಶ್ರೀ ತನಗೆ ಗ್ರಾಮಸ್ತರು ನೀಡಿದ ಸೇವೆ ಗೆ ಅಭಾರಿಯಾಗಿದ್ದೆನೆ ಎಂದರು.
ಸಮಾರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಲೀಲಾ, ಸಹಾಯಕಿ ಸಂದ್ಯಾ ಪ್ರಭು, ಪ್ರಮುಖರಾದ .ಕೆ.ರಾಮಕೃಷ್ಣ ನಾಯಕ್, ವೆಂಕಟೇಶ ನಾಯಕ್ , ನವೀನ ಪೂಜಾರಿ , ಕರ್ಪೆ ಅಂಚೆ ಕಚೇರಿ ಪೊಸ್ಟ್ ಮಾಸ್ಟರ್ ಗಣೇಶ್ , ಶಿಕ್ಷಕ ಭರತ್ ಜೈನ್, ರಮೆಶ್ ಶೆಣೈ,ಅಶಾ ಕಾರ್ಯಕರ್ತೆ ಭಾನುಮತಿ ಭಟ್, ಮಾಜಿ ಗ್ರಾ.ಪ.ಸದಸ್ಯೆ ಮಲ್ಲಿಕಾ, ಜನರ್ದಾನ ಪ್ರಭು, ಅಲ್ಲದೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯಾರಾದ ಲೀಲಾ ಸ್ವಾಗತಿಸಿ, ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಕೃಷ್ಣ ಪ್ರಭು ವಂದಿಸಿದರು.

More from the blog

ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯಿಸಿ AICCTU ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ) ನೂತನ ಅಧ್ಯಕ್ಷರಾಗಿ ಜಗದೀಶ್ ಎನ್ ಆಯ್ಕೆ..

ಬಂಟ್ವಾಳ : ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ ಇದರ ವಾರ್ಷಿಕ ಮಹಾಸಭೆಯು ಜೂ 29ರಂದು ಸಂಘದ ಸಭಾಭವನದಲ್ಲಿ ನಡೆದು...

ಕೊಲೆಯತ್ನ ಪ್ರಕರಣ : 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..

ಬಂಟ್ವಾಳ : ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳದ ಬಿ ಮೂಡ ಗ್ರಾಮ ನಿವಾಸಿ ಅಕ್ಬರ್ ಸಿದ್ದಿಕ್ ಬಂಧಿತ ಆರೋಪಿ. 2011ನೇ ಸಾಲಿನಲ್ಲಿ ಬಂಟ್ವಾಳ ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ...

‘ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು’- ಒಡಿಯೂರು ಶ್ರೀ

ವಿಟ್ಲ: ಕೃಷಿ ಎಂಬುದು ಶ್ರೇಷ್ಠವಾಗಿದ್ದು, ಹೃದಯಕ್ಕೂ, ಭೂಮಿಯಲ್ಲಿಯೂ ಕೃಷಿ ನಡೆಯಬೇಕು. ಪ್ರತಿಯೊಂದಕ್ಕೂ ಸಂಸ್ಕಾರ ನೀಡುವ ಕಾರ್ಯವಾದಾಗ ಸುಸೂತ್ರವಾಗಿ ನಡೆಯುತ್ತದೆ. ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು. ಆಧ್ಯಾತ್ಮದ ಜಾಗೃತಿಯಿಂದ ಬದುಕು ಸುಂದರವಾಗುತ್ತದೆ. ಕಲೆ,...