ಬಂಟ್ವಾಳ: ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಎಂಬ ಸುದ್ದಿ ಬೆಳಿಗ್ಗೆ ಯಿಂದ ಹರಡಿತ್ತು.
ಈತನ ಮನೆಯಿಂದ ತಪ್ಪಿಸಿಕೊಂಡು ಹೋದ ಎಂಬ ವದಂತಿ ಹಬ್ಬಿತ್ತು ಅಲ್ಲದೆ ಜನರು ಒಂದು ರೀತಿಯ ಭಯದಿಂದ ಕೂಡಿದ್ದರು.


ಸಜೀಪನಡು ಗ್ರಾಮದ ಲಕ್ಷಣ ಕಟ್ಟೆಯ ಎಳೆಯ ಕಂದಮ್ಮನಿಗೆ ಕೊರೊನೊ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ಮನೆಯಲ್ಲಿರುವ ಮಗುವಿನ ಅಜ್ಜ, ಮಗುವಿನ ಅಪ್ಪ, ಚಿಕ್ಕಪ್ಪ ಹಾಗೂ ಚಿಕ್ಕಮ್ಮ ನನ್ನು ಮುಡಿಪುವಿನ ಪ್ರತ್ಯೇಕ ಮನೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
ಆದರೆ ಮಗುವಿನ ಅಜ್ಜ ಮಾತ್ರ ಇಂದು ಮುಂಜಾನೆ ವೇಳೆ ಮುಡಿಪುವಿನ ಮನೆಯಿಂದ ಹೊರಗೆ ಬಂದು ಆತ ಸಮೀಪನಡು ಗ್ರಾಮದ ಮನೆಗೆ ಆತ ಮುಂಜಾನೆ ಬಂದಿದ್ದ ಕೂಡಲೇ ಬಂಟ್ವಾಳ ಗ್ರಾಮಾಂತರ ಪೋಲೀಸರು ಆತನನ್ನು ವಾಪಾಸು ಮುಡಿಪುವಿನಲ್ಲಿನ ಇಲಾಖೆ ಸೂಚಿಸಿದ ಹೊಂಕ್ವಾರಂಟೈನ್ ಗೆ ಕಳುಹಿಸಿದ್ದಾರೆ.
ಆತನಿಗೆ ಇಲ್ಲಿಗೆ ಬರಲು ವಾಹನದ ನೆರವು ನೀಡಿದವರು ಯಾರು ಮತ್ತು ಇಷ್ಟು ಪೋಲೀಸ್ ಸರ್ಪಗಾವಲು ಇದ್ದರೂ ಆತ ಹೇಗೆ ಬಂದ ಎಂಬುದೇ ಪ್ರಶ್ನೆಯಾಗಿದೆ.
ಸಜೀಪ ನಡು ಗ್ರಾಮದ ಲಕ್ಷಣಕಟ್ಟೆ ಎಂಬಲ್ಲಿನ 10 ತಿಂಗಳ ಕಂದಮ್ಮನಿಗೆ ಕೊರೊನೊ ಸೊಂಕು ದೃಡಪಟ್ಟ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಸಂಪೂರ್ಣ ಲಾಕ್ ಅಗಿದೆ.
ಪ್ರಸ್ತುತ ಪರಿಸ್ಥಿತಿ ಯಲ್ಲಿ ಅ ಗ್ರಾಮಕ್ಕೆ ಯಾರು ಬರುವಂತಿಲ್ಲ, ಹೊರಗಿನ ವ್ಯಕ್ತಿಗಳು ಇತ್ತ ಕಡೆ ನೋಡುವಂತೆ ಯೂ ಇಲ್ಲ್ .ಆರೋಗ್ಯ ಇಲಾಖೆಯ ನಿರ್ದೇಶನದಂತೆ ಗರಿಷ್ಠ ದಿನಗಳವರೆಗೆ ಇದೇ ರೀತಿ ಮುಂದುವರಿಯುತ್ತದೆ.
ಈ ಗ್ರಾಮದ ಜನರು ಯಾರೂ ಕೂಡಾ ಮನೆಯಿಂದ ಹೊರಬರುತ್ತಿಲ್ಲ, ಸಜೀಪನಡು ಪೇಟೆ ಸಂಪೂರ್ಣ ಬಂದ್ ಅಗಿದೆ. ಗ್ರಾಮದ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಗ್ರಾ.ಪಂ.ಅಧಿಕಾರಿಗಳ ನೇತ್ರತ್ವದಲ್ಲಿ ನೀಡಲಾಗುತ್ತಿದೆ.
ಗ್ರಾಮಾಂತರ ಎಸ್.ಐ.ಪ್ರಸನ್ನ ಸಜೀಪನಡು ಗ್ರಾಮದಲ್ಲಿ ಮೊಕ್ಕಾಂ
ಮಾ.26 ರಂದು ಗುರುವಾರ ಸಂಜೆ ಸೊಂಕು ಪ್ರಕರಣ ದ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಎಸ್. ಪಿ.ಲಕ್ಮೀಪ್ರಸಾದ್ ಬೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಬಳಿಕ ಕೊರೊನೊ ಪ್ರಕರಣ ದೃಡವಾದ ಬಳಿಕ ಮಾ.27 ರಂದು ಮತ್ತೆ ಸ್ಥಳಕ್ಕೆ ಭೇಟಿ ನೀಡಿ ದ ಎಸ್.ಪಿ.ಯವರು ಅಲ್ಲಿನ ಗ್ರಾ.ಪಂ.ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕ ಮಾಡಿ ಲಾಕ್ ಡೌನ ಸಂದರ್ಭದಲ್ಲಿ ಯಾರಿಗೂ ತೊಂದರೆ ಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅದೇಶ ನೀಡಿದ್ದಾರೆ.
ಗುರುವಾರ ಸಂಜೆಯಿಂದ ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರು ಸಜೀಪನಡು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.
ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಯಾರು ಹೊರಗೆ ಬರದಂತೆ ಇವರ ಜೊತೆಯಲ್ಲಿ ಇವರ ಇಡೀ ಗ್ರಾಮಾಂತರ ಪೋಲೀಸ್ ಠಾಣೆಯ ತಂಡ ಹಗಲಿರುಳು ಶ್ರಮಿಸುತ್ತಿವೆ.
ಹೆಚ್ಚು ವರಿಯಾಗಿ ಒಂದು ಕೆ.ಎಸ್.ಆರ್.ಪಿ.ಪೋಲೀಸ್ ತುಕಡಿ ಕೂಡಾ ಇಲ್ಲಿ ಮೊಕ್ಕಾಂ ಹೂಡಿದ್ದಾರೆ.
ಹೋಂ ಕ್ವಾರಂಟೈನ್
ಮಗುವಿಗೆ ಸೊಂಕು ದೃಡವಾದ ಬಳಿಕ
ಮಗು ಸಹಿತ ತಾಯಿ ಹಾಗೂ ಅಜ್ಜಿ ಯನ್ನು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ.
ಅವರಿಗೂ ಕೂಡ ಸೊಂಕು ತಗಲಿರುವ ಸಾಧ್ಯತೆ ಗಳಿರುವುದರಿಂದ ಅವರನ್ನು ನಿಗಾದಲ್ಲಿರಿಸಲಾಗಿದೆ.ಉಳಿದಂತೆ ಮಗವಿನ ತಂದೆ,ಚಿಕ್ಕಪ್ಪ, ಹಾಗೂ ಚಿಕ್ಕಮ್ಮ ಹಾಗೂ ಅಜ್ಜ ನನ್ನು ಮುಡಿಪುವಿನ ಪ್ರತ್ಯೇಕ ಮನೆಯಲ್ಲಿ ಹೋಂ.ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದುಇಲಾಖೆ ತಿಳಿಸಿದೆ.
ದ.ಕ.ಜಿಲ್ಲೆಯ ಲ್ಲಿ ಈವರಗೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿದ್ದು ನೆರೆಯ ಕೇರಳದ ಲ್ಲಿ ದಿನೇ ದಿನ ಪ್ರಕರಣ ಗಳು ಜಾಸ್ತಿಯಾಗುತ್ತಿದೆ.

