ಬಂಟ್ವಾಳ: ಸಜೀಪಮುನ್ನೂರು ಮಂಜಲ್ ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನ ವ್ಯವಸ್ಥಾಪನ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಸುಬ್ರಹ್ಮಣ್ಯ ಭಟ್ ಅವರಿಗೆ ಗೌರವಾರ್ಪಣೆ ಸಜೀಪಮುನ್ನೂರು ಪಿ.ಡಿ.ಓ. ದೇವಸ್ಥಾನದ ಆಡಳಿತ ಅಧಿಕಾರಿ ಶಿವ ಗೊಂಡಪ್ಪ ಬಿರದಾರ ಮಾಡಿದರು.


ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಶಾಮ್,ಎಂ., ಕೇಶವ ಭಟ್, ಗಿತೇಶ್ ಗಟ್ಟಿ, ಕುಸುಮ, ಪ್ರಮೀಳಾ ಗಟ್ಟಿ, ಮನೋಜ್ ಆಳ್ವ, ನಾರಾಯಣ ಐತಾಳ, ಗಣೇಶ್ ಕುಲಾಲ್, ಸಂತೋಷ್ ಎಂ.ವಿ., ಮಾಜಿ ಸದಸ್ಯ ಪುರಂದರ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.












