ಬಂಟ್ವಾಳ: ಹಳೆವಿದ್ಯಾರ್ಥಿಗಳ ಸಮಾವೇಶದಲ್ಲಿ 30 ದಶಕಗಳ ಇತಿಹಾಸವಿರುವ ಸಜಿಪ ಪದವಿ ಪೂರ್ವ ಕಾಲೇಜಿಗೆ 1994-95 ಬ್ಯಾಚ್ ನ ವಿದ್ಯಾರ್ಥಿಗಳಿಂದ ಕಂಪ್ಯೂಟರ್, ಪ್ರಿಂಟರ್. ಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ 28 ವರುಷದಿಂದ ನಿರಂತರ ಉಪನ್ಯಾಸಕ ಸೇವೆ ಮಾಡಿ ಪ್ರಸ್ತುತ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ಬಾಬು ಗಾವಂಕರ್ ರವರನ್ನು ಹಳೆ ವಿದ್ಯಾರ್ಥಿ ಗಳಿಂದ ಸನ್ಮಾನಿಸಲಾಯಿತು.


ಹಳೆ ವಿದ್ಯಾರ್ಥಿಗಳಲ್ಲಿ ಒಬ್ಬರಾದ.. ಸಿ. ಸಿ. ಬಿ ಪೊಲೀಸ್ ಸೇವೆಯಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕ ಪಡೆದ ಅಬ್ದುಲ್ ಜಬ್ಬಾರ್ ಇವರನ್ನು ಅಭಿನಂದಿಸಲಾಯಿತು. ಹಿರಿಯರಾದ ಕಾಲೇಜಿನ ಮಾಜಿ ಅಧ್ಯಕ್ಷರಾದ ದಿ| ಸದಾನಂದ ಪೂಂಜಾ ಮತ್ತು ವಿದ್ಯಾರ್ಥಿಗಳಾದ ದಿ | ತಾರಾನಾಥ್ ಸಜಿಪ, ದಿ | ಕಿರಣ್ ಅಲಾಡಿ, ಇವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಯಸ್. ಡಿ. ಯಮ್. ಸಿ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಜಿಪ, ಮಹಾಬಲ ರೈ, ಸುರೇಶ್ ಶೆಟ್ಟಿ, ವಿಶ್ವನಾಥ್ ಕೊಟ್ಟಾರಿ, ತಂತ್ರಿಗಳಾದ ಸುಬ್ರಮಣ್ಯ ಭಟ್, ಪ್ರಂಶುಪಾಲರಾದ ಬಾಬು ಗಾವ0ಕರ್ ಉಪಸ್ಥಿತರಿದ್ದರು. ವಕೀಲರಾದ ರೋಷನ್, ಬ್ಯಾಂಕ್ ಮೆನೇಜರ್ ಪುರಂದರ್ ಸಜಿಪ, ಪಿ. ಡಿ. ಓ ನಾಗೇಶ್ ಮಾರ್ತಾಜೆ, ಪೊಲೀಸ್ ಹೆಡ್ ಕಾನ್ಸ್ಟಬಲ್ ಶಾಂತಪ್ಪ ಬಾಬು, ಪ್ರಮೀಳಾ, ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ಉಪನ್ಯಾಸಕರಾದ ವಿಷ್ಣುಮಯ್ಯ ಸ್ವಾಗತಿಸಿ. ಸುಕುಮಾರ್ ಬಂಟ್ವಾಳ್ ಪ್ರಸ್ತಾವನೆ ಗೈದರು, ನಾಗಪ್ಪ ಪಣೋಲಿಬೈಲು ಧನ್ಯವಾದ ನೀಡಿದರು.
ಶಿವಪ್ರಸಾದ್ ಶೆಟ್ಟಿ ಮತ್ತು ಪ್ರಮೀಳಾ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

