Wednesday, February 4, 2026

ಕುಸಿಯುವ ಭೀತಿಯಲ್ಲಿದೆ ಮನೆ ಮನೆ ರಿಪೇರಿಗೆ ಬೇಕಾಗಿದೆ ಸಹಾಯ ಹಸ್ತ

ಬಂಟ್ವಾಳ: ನೋಡಲು ಮನೆಯಂತೆ ಕಾಣುತ್ತದೆ ಆದರೆ ಮನೆಯೊಳಗೆ ಕಾಲಿಟ್ಟರೆ ಹಾವಿನ ಹುತ್ತಗಳು ಬೆಳೆದಿದೆ, ಮೇಲೆ ನೋಡಿದರೆ ಆಕಾಶ ಕಾಣುತ್ತದೆ, ಕೆಳಗೆ ಮಣ್ಣಿನ ನೆಲ , ಯಾವಾಗ ಮೈಮೇಲೆ ಬೀಳುತ್ತೆ ಅನ್ನುವ ಭಯ, ಆದರೆ ಭಯದ ನಡುವೆಯೂ ಬದುಕುವ ಆಸೆ.

ಇದು ಸಜೀಪಮುನ್ನೂರು ಗ್ರಾಮದ ನಾಗನವಳಚ್ಚಿಲ್ ಎಂಬಲ್ಲಿ ವಾಸ ವಾಗಿರುವ ತಾಯಿ ಮತ್ತು ಮಗನ ಮುರುಕಲು ಮನೆಯ ಕಥೆ.

ನಾಗನವಳಚ್ಚಿಲ್ ನಿವಾಸಿ ಕಮಲಾಕ್ಷಿ ಹಾಗೂ ಅವರ ಪುತ್ರ ಜಯಪ್ರಕಾಶ್ ಈ ಮನೆಯಲ್ಲಿ ವಾಸವಾಗಿದ್ದು ತೀರಾ ಬಡತನದ ಜೀವನ‌ ಇವರದು.

ಇಂತಹ ಧಯನೀಯ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ಕುಟುಂಬದ ಬಗ್ಗೆ ಬೆಳಕು ಚೆಲ್ಲುವ ಬಗ್ಗೆ ಈ ವರದಿ.

ಈ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮನೆಯೇ ಕುಸಿಯುವ ಭೀತಿಯಲ್ಲಿದೆ.

ಪ್ರಸ್ತುತ ಹಂಚುಗಳು ಬಿದ್ದು ಹೋಗಿದ್ದು ಅರ್ಧ ಉಳಿದ ಮೇಲ್ಚಾವಣಿಗೆ ಟರ್ಪಾಲು ಮುಚ್ಚಲಾಗಿದ್ದು, ಆದು ಹರಿದಿದೆ. ಮಳೆ ಬಂದರೆ ನೀರು ಮನೆಯೊಳಗೆ ಬೀಳುತ್ತದೆ ಎಂಬ ಚಿಂತೆ ಅವರದ್ದು,

ಗಂಡನನ್ನು ಕಳೆದಕೊಂಡು ಮಗನ ಜವಬ್ದಾರಿ ಕಮಲಾಕ್ಷಿ ಅವರ ಹೆಗಲಿಗೆ ಬಿದ್ದಾಗ , ಅವರು ಬೀಡಿ ಸುತ್ತಿ ಜೀವನ ಮಾಡುತ್ತಾ ಜೊತೆಗೆ ಮಗನಿಗೆ ವಿದ್ಯಾಭ್ಯಾಸ ನೀಡಿದರು. ಅ ಬಳಿಕ ದುಡಿಯಲು ಶಕ್ತಿ ಯಿಲ್ಲದ ತಾಯಿಯನ್ನು ಸಾಕಬೇಕಾದ ಹೊಣೆ ಮಗನ ಮೇಲೆ ಬಿತ್ತು.

ಜಯಪ್ರಕಾಶ್ ಅವರು ಸಮರ್ಪಕ ಕೆಲಸವಿಲ್ಲದೆ, ಸಣ್ಣ ಪುಟ್ಟ ಕೆಲಸಕ್ಕೆ ಹೋಗುತ್ತಾರೆ. ಇವರ ದುಡಿಮೆ ಮನೆ ನಿರ್ವಹಣೆಗೆ ಮಾತ್ರ ಸಾಲುತ್ತಿದ್ದು, ಮನೆಯ ದುರಸ್ತಿ ಕಾರ್ಯ ಮಾಡುವುದು ಇವರ ದುಡಿಮೆಯಿಂದ ಸಾಧ್ಯವಾಗಿಲ್ಲ.

ಮೇಲಿಂದ ನೋಡುವಾಗ ಮನೆ ಸುಸ್ಥಿತಿಯಲ್ಲಿ ಕಂಡರೂ, ಒಳಭಾಗಕ್ಕೆ ನೋಡಿದರೆ ಮನೆಯ ದಯನೀಯ ಸ್ಥಿತಿಯ ಅರಿವಾಗುತ್ತದೆ. ಮನೆಯ ಹಿಂಭಾಗ ಒಳಗಡೆಯೇ ಹುತ್ತ ಬೆಳೆದಿದ್ದು, ಅದನ್ನು ನೋಡುವಾಗಲೇ ಹೆದರಿಕೆ ಹುಟ್ಟುತ್ತದೆ. ಮಳೆ ಗೋಡೆಗಳು ಮಣ್ಣಿನ ಗೋಡೆಗಳಾಗಿದ್ದು, ಮಳೆ ಸುರಿದು ನೀರು ನುಗ್ಗಿದ್ದರೆ ಗೋಡೆಗಳು ಕೂಡ ಬೀಳುವ ಅಪಾಯವಿದೆ.

ಮನೆಯ ಅವ್ಯವಸ್ಥೆಯ ಕುರಿತು ಸಂಬಂಧಪಟ್ಟ ಗ್ರಾ.ಪಂ., ಸ್ಥಳೀಯ ದಾನಿಗಳಿಗೂ ಮನವಿ ಮಾಡಿರುವುದಾಗಿ ಮನೆಯವರು ತಿಳಿಸಿದ್ದು, ಈ ಕುರಿತು ತತ್‌ಕ್ಷಣ ಕ್ರಮಕೈಗೊಳ್ಳಬೇಕಿದೆ. ಕಳೆದ ಹಲವು ದಶಕಗಳಿಂದ ಇವರಿಬ್ಬರು ಇದೇ ಮನೆಯಲ್ಲಿ ವಾಸಿಸುತ್ತಿದ್ದು, ದುರಸ್ತಿ ಮಾಡುವುದು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಕಮಲಾಕ್ಷಿಯವರು ಅಭಿಪ್ರಾಯಿಸುತ್ತಾರೆ. ಹೀಗಾಗಿ ಸಹೃದಯಿ ದಾನಿಗಳು ಮನೆಯ ದುರಸ್ತಿಗೆ ನೆರವು ನೀಡುವ ಕಾರ್ಯ ಮಾಡಬೇಕಿದೆ.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...