Wednesday, June 25, 2025

ಸನ್ಯಾಸತ್ವದಲ್ಲಿ ಅದ್ವಿತೀಯ ಸಾಧನೆ ಸಾಗ ಸಾಧು ಧೀಕ್ಷೆ ಪಡೆದ ಬಡಗಬೆಳ್ಳೂರಿನ ಸಂತ

ಬಂಟ್ವಾಳ: ಹುಟ್ಟು ಸಾವಿನ ಮಧ್ಯೆ ಸಾಧನೆಯ ಮೂಲಕ ಸಮಾಜಕ್ಕೆ ಸಮರ್ಪಣೆಯಾಗಬೇಕು, ಆಧ್ಯಾತ್ಮದ ಮೂಲಕ ಜೀವನಕ್ಕೆ ಅಂತಿಮ ರೂಪ ನೀಡಬೇಕು ಎಂಬ ಛಲದಿಂದ ಸನ್ಯಾಸ ವೃತವನ್ನು ಆಯ್ಕೆ ಮಾಡಿದ ವಿಶೇಷ ವಾಗಿ ತುಳುನಾಡಿನ ಅಪರೂಪದ ನಾಗಸಾಧು ಓರ್ವ ರ ಡಿಟೈಲ್ ಸ್ಟೋರಿ ನಿಮ್ಮ ಮುಂದೆ ಇದೆ.

ಬಡಬೆಳ್ಳೂರಿನ ದಿ| ರುಕ್ಮಯ ಪೂಜಾರಿಯವರ ಪುತ್ರರಾಗಿರುವ ವಿಠಲ್ ಪೂಜಾರಿ ಅವರೇ ನಾಗಸಾಧು ದೀಕ್ಷೆ ಸ್ವೀಕರಿಸಿರುವ ಸಂತ. ಬಾಲ್ಯದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ಮೈಸೂರಿನಲ್ಲಿ ಧರ್ಮ ಜಾಗರಣದ ಪ್ರಚಾರಕನಾಗಿ ಕೆಲಸ ಮಾಡಿರುವ ಜತೆಗೆ ಆರ್‌ಎಸ್‌ಎಸ್‌ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಬೆಳ್ತಂಗಡಿಯ ವೀರಕೇಸರಿ ಸಂಘಟನೆಯ ಸದಸ್ಯನಾಗಿಯೂ ದುಡಿದಿದ್ದು, ಸಂಘಟನೆಯ ಪದ್ಮನಾಭ ಪೂಜಾರಿ ಸೇರಿದಂತೆ ಮೊದಲಾದವರು ತನಗೆ ನೀಡಿದ ಸಹಕಾರವನ್ನು ಸ್ಮರಿಸುತ್ತಾರೆ.

ಹರಿದ್ವಾರ ಕುಂಭಮೇಳದಲ್ಲಿ ತಪೋನಿಧಿ ಪಂಚಾಯಿತಿ ಆನಂದ್ ಅಖಾಡದ ಪರಮಹಂಸ ಬಾಬಾ ಶ್ರೀ ಬನ್ಖಂಡಿ ಮಹಾರಾಜ್ ಜೀ ಅವರ ಶಿಷ್ಯವಾಗಿ ದೀಕ್ಷೆ ಪಡೆದಿದ್ದು, ತಪೋನಿಧಿ ಬಾಬಾ ವಿಠ್ಠಲ್‌ಗಿರಿ ಮಹಾರಾಜ್ ಜೀ ಎಂಬ ಆಧ್ಯಾತ್ಮದ ಹೆಸರನ್ನು ಪಡೆದಿದ್ದಾರೆ.

ಉತ್ತರ ಭಾರತದ ಬದ್ರಿನಾಥ್, ಹರಿದ್ವಾರ, ಕೇದರ್‌ನಾಥಗಳಿಗೆ ಯಾತ್ರೆ ಮಾಡುತ್ತಾ ಕುಠೀರದಲ್ಲಿ ವಾಸವಾಗಿ ಆಧ್ಯಾತ್ಮದ ಸಾಧನೆ ಮಾಡುತ್ತಿದ್ದಾರೆ.

ನಾಗ ಸಾಧು ಪದವಿ ಸ್ವೀಕರಿಸಿರುವ ಬಾಬಾ ವಿಠ್ಠಲ್‌ಗಿರಿ ಮಹಾರಾಜ್ ಪ್ರತಿಕ್ರಿಯಿಸಿ, ತಾನು ಪ್ರಚಾರವನ್ನು ಬಯಸುವುದಿಲ್ಲ. ದೇವರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪರಿಶ್ರಮದ ಫಲವಾಗಿ ಗುರುಗಳು ಧೀಕ್ಷೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಜೀವನದುದ್ದಕ್ಕೂ ಬೆಂಬಲ ನೀಡಿದ್ದು, ಮೈಸೂರಿನಲ್ಲಿ ಧರ್ಮಜಾಗರಣದ ಪ್ರಚಾರಕನಾಗಿಯೂ ಕೆಲಸ ಮಾಡಿದ್ದೇವೆ.

More from the blog

ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ...

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...

Rain Alert : ರಾಜ್ಯದಲ್ಲಿ ಮುಂಗಾರು ಚುರುಕು – ಕರಾವಳಿ ಸೇರಿ ಹಲವೆಡೆ 3 ದಿನ ಭಾರೀ ಮಳೆ ಸಾಧ್ಯತೆ..

ಮಂಗಳೂರು : ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಸೇರಿ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಆರಂಭವಾಗಿ 15 ದಿನಗಳು ಕಳೆದರೂ...

ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ

ಬಂಟ್ವಾಳ : ಕವಿ‌, ಸಾಹಿತಿ, ಸಂಘಟಕ ಯುವವಾಹಿನಿಯ ಸಲಹೆಗಾರ ಬಿ ತಮ್ಮಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ ಆಯೋಜಿಸಲಾತ್ತು. ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹೊಸಪೇಟೆ , ವಿಜಯನಗರ, ಬೆಂಗಳೂರು, ಚಿತ್ರದುರ್ಗ,...