ಕುದ್ಯಾಡಿ: ಸದ್ಧರ್ಮ ಯುವಕ ಮಂಡಲ ಕುದ್ಯಾಡಿ ಇದರ ವತಿಯಿಂದ ವೇಣೂರು ಶ್ರೀ ಗುರು ಚೈತನ್ಯ ವೃದ್ಧಾಶ್ರಮಕ್ಕೆ 1ಕ್ವಿಂಟಾಲ್ 25 ಕೆ.ಜಿ ಅಕ್ಕಿ ಹಾಗೂ ಇತರ ತರಕಾರಿ ಸಾಮಾಗ್ರಿಗಳನ್ನು ವಿತರಿಸಲಾಯಿತು.



ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ಅಚ್ಯುತ್ ಪೂಜಾರಿ ಕೊಡಿಬಾಳೆ, ಅಧ್ಯಕ್ಷ ಶುಭಕರ ಪೂಜಾರಿ ಕುದ್ಯಾಡಿ, ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೊಡಿಬಾಳೆ, ಕೋಶಾಧಿಕಾರಿ ಸಂಜಯ್ ಪೂಜಾರಿ ಕೊಡಿಬಾಳೆ, ಮಾಜಿ ಕಾರ್ಯದರ್ಶಿ ಸದಾನಂದ ಪೂಜಾರಿ ಬಿ ಬಾಕ್ಯರಡ್ಡ, ಪಂಚಾಯತ್ ಸದಸ್ಯರಾದ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.












