ಬಂಟ್ವಾಳ: ಹುಟ್ಟಿನಿಂದ ಸಾವಿನವರೆಗೆ ಮತ್ತು ಸಾವಿನ ನಂತರ ಅವಲಂಬಿತರಿಗೆ ಜೀವನ ಭದ್ರತೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ನೀಡಿ ಭಾರತವನ್ನು ಪರಮವೈಭವದ ಹಾದಿಯಲ್ಲಿ ತಂದು ನಿಲ್ಲಿಸಿದ ಮೋದಿ ನೇತೃತ್ವದ ಸ್ಥಿರ ಸರಕಾರ ಮತ್ತೊಮ್ಮೆ ಗೆಲ್ಲಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ ಎಂಬ ಧ್ಯೇಯ ವಾಕ್ಯದೊಂದಿಗೆ ಯುವಮೋರ್ಚಾ ಕಾರ್ಯಕರ್ತರು ಚುನಾವಣಾ ಕಣಕ್ಕೆ ದುಮುಕಬೇಕೆಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ರವರು ಹೇಳಿದರು.


ಪಾಣೆಮಂಗಳೂರು ಗ್ರಾಮದ ಕರುಣಾಕರ ಮೆಲ್ಕಾರ್ ಇವರ ಮನೆಯಲ್ಲಿ ನಡೆದ ಬಂಟ್ವಾಳ ಯುವಮೋರ್ಚಾ ಕಾರ್ಯಕಾರಿಣಿ ಉದ್ಫಾಟಸಿ ಅವರು ಮಾತನಾಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ್ ಶೆಟ್ಟಿಯವರು ಮಾತನಾಡಿ ಜಗತ್ತಿನಲ್ಲೆ ಗೌರವಗಳಿಂದ ಮೊದಿ ಸರಕಾರ ಮತ್ತೊಮ್ಮೆ ಆಡಳಿತ ನಡೆಸುವಂತಾಗಬೇಕಾದರೆ ಯುವಶಕ್ತಿ ಜಾಗೃತವಾಗಬೇಕು. ಸುಳ್ಳು ಮಾತಾಡುವ ಭ್ರಷ್ಟಾಚಾರ ಮಾಡುವ ವಿರೋಧ ಪಕ್ಷಗಳ ನಿಜಬಣ್ಣವನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಯುವಮೋರ್ಚಾ ಕಾರ್ಯಕರ್ತರು ಮಾಡಬೇಕೆಂದರು ಚುನಾವಣೆಯ ಸಮಯ ರಾಷ್ಟ್ರೀಯ ಮತ್ತು ರಾಜ್ಯ ಯುವಮೋರ್ಚಾದಿಂದ ನೀಡಿರುವ ಕೆಲಸಗಳನ್ನು ಯಶಸ್ವಿಯಾಗಿ ಮಾಡುವುದಲ್ಲದೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ವಿರೋದ ಪಕ್ಷಗಳು ಎಣಿಸಲಾರದಂತ ಗೆಲುವಿನ ಅಂತರ ಹೆಚ್ಚಿಸುವಲ್ಲಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡುವಂತೆ ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಹರೀಶ್ ಮೂಡಶೆಡ್ಡೆ ತಿಳಿಸಿದರು.
ಸಾಮಾಜಿಕ ಜಾಲತಾಣಗಳನ್ನು ಬಿಜೆಪಿಯ ಗೆಲುವಿಗೆ ಪೂರಕವಾಗಿ ಬಳಸಿಕೊಳ್ಳುವ ಬಗ್ಗೆ ಕಿವಿಮಾತು ಹೇಳಿದರು. ಇನ್ನೊರ್ವ ಯುವಮೋರ್ಚಾ ಪ್ರ.ಕಾರ್ಯದರ್ಶಿ ಸಂದೇಶ್ ಶೆಟ್ಟಿ ಕಾರ್ಯಕರ್ತರು ನಿರಂತರ ಚಟುವಟಿಕೆಯಲ್ಲಿರಬೇಕು ಎಂದರು.
ಕ್ಷೇತ್ರ ಕಾರ್ಯದರ್ಶಿ ರಂಜಿತ್ ಮೈರ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ಬಜ ಉಪಸ್ಥಿತರಿದ್ದರು. ಬಂಟ್ವಾಳ ಯುವಮೋರ್ಚಾ ಪ್ರ.ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು ಸ್ವಾಗತಿಸಿ, ಕಾರ್ಯದರ್ಶಿ ಸುರೇಶ್ ಕೋಟ್ಯಾನ್ ವಂದಿಸಿದರು. ಇನ್ನೊರ್ವ ಕಾರ್ಯದರ್ಶಿ ಲೋಹಿತ್ ಕೊಳ್ನಾಡು ಕಾರ್ಯಕ್ರಮ ನಿರ್ವಹಿಸಿದರು.