Sunday, January 25, 2026

ಅನಾಥ ವ್ಯಕ್ತಿಯನ್ನು ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಎಸ್.ಐ.ಚಂದ್ರಶೇಖರ್

ಬಂಟ್ವಾಳ: ದುಡಿಯಲು ಶಕ್ತಿಯಿಲ್ಲ, ತನ್ನವರು , ಕೇಳುವವರು ಅಂತ ಯಾರೂ ಇಲ್ಲ, ಒಪ್ಪೋತ್ತಿನ ಊಟಕ್ಕೂ ಇನ್ನೋಬ್ಬರ ಕೈ ಚಾಚುವ ಸನ್ನಿವೇಶ, ಮಾನ ಕಾಪಾಡಲು ಅರೆಬರೆ ಬಟ್ಟೆ , ದೇವಸ್ಥಾನ, ಮಠ, ಮಂದಿರ ಚರ್ಚ್ ಗಳೇ ವಾಸಸ್ಥಾನ ಅಂತ ಊರೂರು ಸುತ್ತಿ ಬಸವಳಿದ ವೃದ್ದರೋರ್ವರನ್ನು ವೃದ್ದಾ ಆಶ್ರಮ ಕ್ಕೆ ಕಳುಹಿಸಿ ಮಾನವೀಯತೆ ಮೆರೆದ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್.

ಇವರ ಹೆಸರು
ಅಶೋಕ್ ನಾಯಕ್ ಪ್ರಾಯ ೬೩ ವರ್ಷ ತಂದೆ: ನರಸಿಂಹ ಶ್ರೀನಿವಾಸ ನಾಯಕ್, ವಾಸ: ಅಂಬಲಪಾಡಿ ಉಡುಪಿ ತಾಲೂಕಿನವರು.

ಸುಮಾರು ೨೦ ದಿನಗಳಿಂದ ಬಂಟ್ವಾಳ ನಗರ ಠಾಣಾ ಸರಹದ್ದಿನ ದೇವಸ್ಥಾನ, ಚರ್ಚ್, ಬಸ್ಸು ನಿಲ್ದಾಣದಲ್ಲಿ ಉಳಕೊಳ್ಳುತ್ತಿದ್ದು, ಈ ವಿಚಾರವನ್ನು ಸಾರ್ವಜನಿಕರು ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರ ಗಮನಕ್ಕೆ ತಂದರು.
ಎಸ್‌. ಐ.ಅವರು ಸಿಬ್ಬಂದಿ ಗಳ ಜೊತೆ ಸೇರಿ ಅವರನ್ನು ಠಾಣೆ ಗೆ ಕರೆಸಿ ಕೊಂಡು ಬಂದು
ವಿಚಾರಣೆ ನಡೆಸಿದಾಗ ಅಶೋಕ್ ನಾಯಕ್‌ರವರು ಪ್ರಾಯಸ್ಥರಾಗಿದ್ದು, ವಾರೀಸುದಾರರು ಯಾರೂ ಇರುವುದಿಲ್ಲವಾಗಿ ತಿಳಿಸಿದ್ದಾರೆ.
ಉಡುಪಿ ನಿವಾಸಿಯಾಗಿದ್ದು ಇವರ ಪತ್ನಿ ಸರಸ್ವತಿ ಅವರು ಸುಮಾರು 26 ವರ್ಷಗಳ ಹಿಂದೆ ಗಂಡು ಮಗವಿಗೆ ಜನ್ಮ ನೀಡಿ ಪ್ರಥಮ ಹೆರಿಗೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
ಅಬಳಿಕ ಮಗನನ್ನು ಸಾಕುತ್ತಾ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ದಿನ ಕಳೆದಂತೆ ಮಗ ತಂದೆಯನ್ನು ದೂರ ಮಾಡಿದ್ದಾನೆ ಎಂದು ಅವರ ಹೇಳುತ್ತಾರೆ.
ಅ ಬಳಿಕವೂ ಇವರು ಕೂಲಿ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದರು .
ಆದರೆ ಇತ್ತೀಚಿಗೆ ಇವರಿಗೆ ದುಡಿಯಲು ಶಕ್ತಯಿಲ್ಲದ ಕಾರಣ ದೇವಸ್ಥಾನದಲ್ಲಿ ಉಳಿದುಕೊಳ್ಳುತ್ತಿದ್ದರು.
ಕಳೆದ ಕೆಲ ದಿನಗಳಿಂದ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ದಲ್ಲಿಯೇ ಇವರ ವಾಸವಾಗಿತ್ತು.
ಆದರೆ ಮಳೆ ಬರದೆ ಧರ್ಮಸ್ಥಳ ದಲ್ಲಿ ನೀರಿನ ಕೊರತೆಯಾದಾಗ ಇವರು ಬಂಟ್ವಾಳ ದ ಕಡೆ ಬಂದಿದ್ದರು.
ಹಾಗೆ ಬಂದವರು ಬಂಟ್ವಾಳ ದ ವಿವಿಧ ದೇವಸ್ಥಾನ ಗಳ ಹಾಗೂ ಚರ್ಚ್ ಗಳ ಬಾಗಿಲಿನ ಮಲಗಿಕೊಂಡು ದಿನ ದೂಡುತ್ತಿದ್ದರು.
ಇವರ ಬಗ್ಗೆ ಸಾರ್ವಜನಿಕ ರು ಬಂಟ್ವಾಳ ಎಸ್.ಐ. ಚಂದ್ರಶೇಖರ ಅವರಿಗೆ ಮಾಹಿತಿ ನೀಡಿದರು.
ಎಸ್.ಐ.ಅವರು ಇವರಿಗೆ ಬಟ್ಟೆ ಬರೆ ನೀಡಿ

ಅಶೋಕ ನಾಯಕ ಅವರನ್ನು
ಸ್ನೇಹಾಲಯ ಮಂಜೇಶ್ವರ ವೃದ್ದಾ ಆಶ್ರಮಕ್ಕೆ ಕಳುಹಿಸಿಕೊಡಲಾಯಿತು.

More from the blog

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ – ಕೆ.ಪಿ.ಎಸ್ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ ದಕ್ಷಿಣ ಕನ್ನಡ...

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ..

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವವು ಶತರುದ್ರಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಂತ್ರಿಗಳಾದ ದಿನೇಶ್‌ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಪುಣ್ಯಾಹ, ಗಣಹೋಮ, ಶತರುದ್ರಾಭಿಷೇಕ, ನವಕ ಕಲಶಾಭಿಷೇಕ, ವೀರಾಂಜನೇಯ...