Tuesday, February 11, 2025

ಅನಾಥ ವ್ಯಕ್ತಿಯನ್ನು ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದ ಎಸ್.ಐ.ಚಂದ್ರಶೇಖರ್

ಬಂಟ್ವಾಳ: ದುಡಿಯಲು ಶಕ್ತಿಯಿಲ್ಲ, ತನ್ನವರು , ಕೇಳುವವರು ಅಂತ ಯಾರೂ ಇಲ್ಲ, ಒಪ್ಪೋತ್ತಿನ ಊಟಕ್ಕೂ ಇನ್ನೋಬ್ಬರ ಕೈ ಚಾಚುವ ಸನ್ನಿವೇಶ, ಮಾನ ಕಾಪಾಡಲು ಅರೆಬರೆ ಬಟ್ಟೆ , ದೇವಸ್ಥಾನ, ಮಠ, ಮಂದಿರ ಚರ್ಚ್ ಗಳೇ ವಾಸಸ್ಥಾನ ಅಂತ ಊರೂರು ಸುತ್ತಿ ಬಸವಳಿದ ವೃದ್ದರೋರ್ವರನ್ನು ವೃದ್ದಾ ಆಶ್ರಮ ಕ್ಕೆ ಕಳುಹಿಸಿ ಮಾನವೀಯತೆ ಮೆರೆದ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್.

ಇವರ ಹೆಸರು
ಅಶೋಕ್ ನಾಯಕ್ ಪ್ರಾಯ ೬೩ ವರ್ಷ ತಂದೆ: ನರಸಿಂಹ ಶ್ರೀನಿವಾಸ ನಾಯಕ್, ವಾಸ: ಅಂಬಲಪಾಡಿ ಉಡುಪಿ ತಾಲೂಕಿನವರು.

ಸುಮಾರು ೨೦ ದಿನಗಳಿಂದ ಬಂಟ್ವಾಳ ನಗರ ಠಾಣಾ ಸರಹದ್ದಿನ ದೇವಸ್ಥಾನ, ಚರ್ಚ್, ಬಸ್ಸು ನಿಲ್ದಾಣದಲ್ಲಿ ಉಳಕೊಳ್ಳುತ್ತಿದ್ದು, ಈ ವಿಚಾರವನ್ನು ಸಾರ್ವಜನಿಕರು ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರ ಗಮನಕ್ಕೆ ತಂದರು.
ಎಸ್‌. ಐ.ಅವರು ಸಿಬ್ಬಂದಿ ಗಳ ಜೊತೆ ಸೇರಿ ಅವರನ್ನು ಠಾಣೆ ಗೆ ಕರೆಸಿ ಕೊಂಡು ಬಂದು
ವಿಚಾರಣೆ ನಡೆಸಿದಾಗ ಅಶೋಕ್ ನಾಯಕ್‌ರವರು ಪ್ರಾಯಸ್ಥರಾಗಿದ್ದು, ವಾರೀಸುದಾರರು ಯಾರೂ ಇರುವುದಿಲ್ಲವಾಗಿ ತಿಳಿಸಿದ್ದಾರೆ.
ಉಡುಪಿ ನಿವಾಸಿಯಾಗಿದ್ದು ಇವರ ಪತ್ನಿ ಸರಸ್ವತಿ ಅವರು ಸುಮಾರು 26 ವರ್ಷಗಳ ಹಿಂದೆ ಗಂಡು ಮಗವಿಗೆ ಜನ್ಮ ನೀಡಿ ಪ್ರಥಮ ಹೆರಿಗೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
ಅಬಳಿಕ ಮಗನನ್ನು ಸಾಕುತ್ತಾ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ದಿನ ಕಳೆದಂತೆ ಮಗ ತಂದೆಯನ್ನು ದೂರ ಮಾಡಿದ್ದಾನೆ ಎಂದು ಅವರ ಹೇಳುತ್ತಾರೆ.
ಅ ಬಳಿಕವೂ ಇವರು ಕೂಲಿ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದರು .
ಆದರೆ ಇತ್ತೀಚಿಗೆ ಇವರಿಗೆ ದುಡಿಯಲು ಶಕ್ತಯಿಲ್ಲದ ಕಾರಣ ದೇವಸ್ಥಾನದಲ್ಲಿ ಉಳಿದುಕೊಳ್ಳುತ್ತಿದ್ದರು.
ಕಳೆದ ಕೆಲ ದಿನಗಳಿಂದ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ದಲ್ಲಿಯೇ ಇವರ ವಾಸವಾಗಿತ್ತು.
ಆದರೆ ಮಳೆ ಬರದೆ ಧರ್ಮಸ್ಥಳ ದಲ್ಲಿ ನೀರಿನ ಕೊರತೆಯಾದಾಗ ಇವರು ಬಂಟ್ವಾಳ ದ ಕಡೆ ಬಂದಿದ್ದರು.
ಹಾಗೆ ಬಂದವರು ಬಂಟ್ವಾಳ ದ ವಿವಿಧ ದೇವಸ್ಥಾನ ಗಳ ಹಾಗೂ ಚರ್ಚ್ ಗಳ ಬಾಗಿಲಿನ ಮಲಗಿಕೊಂಡು ದಿನ ದೂಡುತ್ತಿದ್ದರು.
ಇವರ ಬಗ್ಗೆ ಸಾರ್ವಜನಿಕ ರು ಬಂಟ್ವಾಳ ಎಸ್.ಐ. ಚಂದ್ರಶೇಖರ ಅವರಿಗೆ ಮಾಹಿತಿ ನೀಡಿದರು.
ಎಸ್.ಐ.ಅವರು ಇವರಿಗೆ ಬಟ್ಟೆ ಬರೆ ನೀಡಿ

ಅಶೋಕ ನಾಯಕ ಅವರನ್ನು
ಸ್ನೇಹಾಲಯ ಮಂಜೇಶ್ವರ ವೃದ್ದಾ ಆಶ್ರಮಕ್ಕೆ ಕಳುಹಿಸಿಕೊಡಲಾಯಿತು.

More from the blog

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...

ಸಿಲಿಂಡರ್ ಸ್ಫೋಟ : ಓರ್ವನಿಗೆ ಗಾಯ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರದಲ್ಲಿ ಮನೆಯೊಂದರ ಅಡುಗೆ ಅನಿಲದ ಸಿಲಿಂಡರ್ ನಲ್ಲಿ ಸೋರಿಕೆಯುಂಟಾಗಿ ಬೆಂಕಿ ಕಾಣಿಸಿಕೊಂಡು, ಮನೆಯ ಸೊತ್ತುಗಳು ಸುಟ್ಟು ಭಸ್ಮವಾಗಿ, ಓರ್ವ ಗಾಯಗೊಂಡ ಘಟನೆ ನಡೆದಿದೆ. ಸುಭಾಷ್ ನಗರ ನಿವಾಸಿ...

ಬ್ಲಡ್ ಕ್ಯಾನ್ಸರ್ ಗೆ ಪೋಲಿಸ್ ಸಿಬ್ಬಂದಿ ಬಲಿ

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೋಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಇಂದು ನಡೆದಿದೆ. ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ ( 26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ. ಅವಿವಾಹಿತನಾಗಿದ್ದ ಅಭಿಷೇಕ್...